ಭಟ್ಕಳ:
ದಿನಾಂಕ ಮೇ. 19ರಂದು ಶುಕ್ರವಾರ ಬೆಳಿಗ್ಗೆ 10.30 ಘಂಟೆಗೆ ಭಟ್ಕಳ ಹೆಸ್ಕಾಂ ಉಪ-ವಿಭಾಗೀಯ ಕಛೇರಿಯ ಆವರಣದಲ್ಲಿ ಗ್ರಾಹಕರ ಕುಂದುಕೊರತೆಗಳ ಸಂವಾದ ಸಭೆಯನ್ನು ಎರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂದು ಸಭೆಯಲ್ಲಿ ಸಿರಸಿಯ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಅಭಿಯಂತರರು(ವಿ) ಉಪಸ್ಥಿತರಿದ್ದ ಗ್ರಾಹಕರ ಕುಂದು ಕೊರತೆಗಳನ್ನು ಖುದ್ದಾಗಿ ಆಲಿಸಲಿದ್ದಾರೆ. ಕಾರಣ ತಾಲೂಕಿನ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದರೊಂದಿಗೆ ಕುಂದು ಕೊರತೆಗಳನ್ನು ಕೂಡಾ ನೀಗಿಸಿಕೊಳ್ಳಬೇಕು ಎಂದೂ ತಿಳಿಸಲಾಗಿದೆ.
Leave a Comment