ದಾಂಡೇಲಿ :
ಉತಾರ ಮಾಡುವ ಕುರಿತಂತೆ ನಗರ ಸಭೆಯ ಸಿಬ್ಬಂದಿಗಳಿಗೆ ಸರೊಯಾದ ಮಾಹಿತಿಯಿಲ್ಲದೆ ಇರುವುದರಿಂದ ಈ ಬಗ್ಗೆ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ನಗರದ ಬಿಜೆಪಿ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಭೀಮಶಿ.ಆರ್.ಬಾದುಲಿಯವರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರಿಗೆ ಲಿಖಿತ ಮನವಿ ನೀಡಿ ಒತ್ತಾಯಿಸಿದ್ದಾರೆ.
ಸಚಿವರಿಗೆ ನೀಡಿದ ಮನವಿಯಲ್ಲಿ ನಗರ ಸಭೆಯ ಸಿಬ್ಬಂದಿ ಉಪ್ಪಾರ ಎಂಬವರಿಗೆ ಕೊಳಚೆ ಪ್ರದೇಶದ ಕಟ್ಟಡಗಳಿಗೆ (ಆಶ್ರ ಕಾಲೋನಿ, ಗಾಂಧಿನಗರ) ಉತಾರ ಮಾಡಿಕೊಡುವುದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ. ಪರಿಣಾಮವಾಗಿ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೆ ಇವರಿಗೆ ಉತಾರ ಕೊಡುವುದರ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ
Leave a Comment