ಕಾರವಾರ:
ಉತ್ತರಕನ್ನಡ ಜಿಲ್ಲಾ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಕಾರವಾರ ಇದರ 87ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಮೇ 28ರಂದು ಬೆಳಿಗ್ಗೆ 10 ಗಂಟೆಗೆ ಎಂ.ಜಿ ರಸ್ತೆಯಲ್ಲಿರುವ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನೌಕರರ ಪತ್ತಿನ ಸಂಘದ ಎಲ್ಲ ಸದಸ್ಯರು ತಪ್ಪದೇ ಈ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಈ ಸಭೆಯಲ್ಲಿ ಚಾರ್ಟರ್ಡ್ ಅಕೌಂಟ್ನಿಂದ ಪರಿಶೋಧನೆಯಾದ ಲೆಕ್ಕ ಪತ್ರಗಳ ಮಂಡನೆ ಹಾಗೂ ಅನುಮೋದನೆ, ಸಂಘದ ಕೆಲವು ಬೈಲಾ ನಿಯಮಗಳ ತಿದ್ದುಪಡಿ ಹಾಗೂ ಸದಸ್ಯರಿಗೆ ಡಿವಿಡೆಂಡ್ ಘೋಷಣೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಸಂಘವು 2016-17ನೇ ಸಾಲಿನಲ್ಲಿ 991999-00ಗಳಷ್ಟು ನಿವ್ವಳ ಲಾಭಗಳಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಅಭಿವೃದ್ಧಿ ಕಾರಣರಾದ ಹಿಂದಿನ ನಿರ್ದೇಶಕರುಗಳನ್ನು ಮತ್ತು ಸಂಘದ ಕಾರ್ಯದರ್ಶಿಗಳನ್ನು ಈ ಸಭಯಲ್ಲಿ ಸನ್ಮಾನಿಸಲಾಗುವುದು. ಪತ್ತಿನ ಸಂಘದ ಎಲ್ಲ ಸದಸ್ಯರು ಈ ಸರ್ವಸಾಧಾರಣ ಸಭೆಗೆ ವೇಳೆಗೆ ಸರಿಯಾಗಿ ಹಾಜರಿರಲು ಸಂಘದ ಅಧ್ಯಕ್ಷ ಸಂಜೀವ ನಾಯ್ಕ ಕೋರಿದ್ದಾರೆ.
Leave a Comment