ಭಟ್ಕಳ:
ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಕಾಶ್ಮೀರದಲ್ಲಿ ದೇಶ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗಡಿ ಕಾಯುವ ಸೈನಿಕರನ್ನು ಸೆರೆ ಹಿಡಿದು ಹೊಡೆಯುವುದು, ಜೆಹಾದಿ ಉಗ್ರರೊಂದಿಗೆ ಹೋರಾಡುವ ಸೈನಿಕರ ಮೇಲೆ ಕಲ್ಲು ಎಸೆಯುವುದು, ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸ್ಟೇಟ್ ಬಾವುಟವನ್ನು ಬಹಿರಂಗವಾಗಿ ಹಾರಿಸುವುದು ಮುಂತಾದ ದೇಶದ್ರೋಹಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಭಾರತೀಯ ಸೈನಿಕರನ್ನು ಹೊತ್ತೊಯ್ದು ಅವರ ಶರೀರವನ್ನು ಛಿದ್ರ ಛಿದ್ರ ಮಾಡಿದ್ದನ್ನು ಸಹ ಸೈನಿಕರು ಸಹಿಸಿಕೊಂಡಿರಬೇಕಾಗುತ್ತದೆ. ಸೈನಿಕರ ಕೈಯಲ್ಲಿರುವ ಬಂಧೂಕನ್ನು ಹಿರಿಯ ಅಧಿಕಾರಿಗಳ ಆದೇಶವಿಲ್ಲದೇ ಉಪಯೋಗಿಸುವಂತಿಲ್ಲ ಎನ್ನುವುದು ಸೈನಿಕರ ಮನೋಬಲವನ್ನು ಕುಗ್ಗಿಸುತ್ತದೆ. ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೇನೆಗೆ ಸರ್ವಾಧಿಕಾರ ನೀಡಬೇಕು. ಸೈನಿಕರ ಮೇಲೆ ಕಲ್ಲೆಸೆಯುವವರನ್ನು ದೇಶ ವಿರೋಧಿ ಘೋಷಣೆ ಕೂಗುವವರ ಮೇಲೆ ದೇಶದ್ರೋಹಿಗಳೆಂದು ಪ್ರಕರಣ ದಾಖಲಿಸಬೇಕು ಎಂದೂ ಆಗ್ರಹಿಸಲಾಗಿದೆ.
ಅದೇ ರೀತಿ ಧರ್ಮ ಪರಿವರ್ತನೆಗೆ ಪ್ರೇರೇಪಿಸುವ ತೆಲಂಗಾಣದ ಸ್ಟೇಟ್ ಕ್ರಿಶ್ಚಿಯನ್ ಫಾಯನಾನ್ಸ ಕಾರ್ಪೋರೇಶನ್ ನಿರ್ಣಯವನ್ನು ನಿರಾಕರಿಸಬೇಕಾಗಿದೆ. ಅಲ್ಪ ಸಂಖ್ಯಾತ ಮುಸಲ್ಮಾನರಿಗೆ ಮತ್ತು ಕ್ರಿಶ್ಚಿಯನ್ರಿಗೆ ಜನತೆಯ ತೆರಿಗೆಯ ಹಣದಿಂದ ಹಂಚಲಾಗುತ್ತಿದೆ. ತೆಲಂಗಾಣದ ಸ್ಟೇಟ್ ಕ್ರಿಶ್ಚಿಯನ್ ಫಾಯನಾನ್ಸ ಕಾರ್ಪೋರೇಶನ್ ಪರವಾಗಿ ಒಂದು ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಪ ಸಂಖ್ಯಾತರಿಗಾಗಿ ಸುಮಾರು ರೂ.10 ಲಕ್ಷಕ್ಕಿಂತ ಕಡಿಮೆ ಅನುದಾನವನ್ನು ಪಡೆಯಲು ಕೆಲವು ಶರತ್ತು ಹಾಕಲಾಗಿದ್ದು ಅದರಂತೆ ವ್ಯಕ್ತಿಯು ಕ್ರಿಶ್ಚಿಯನ್ ಆಗಿರಬೇಕು. ಆದರೆ ಬಡವರಾಗಿದ್ದರೂ ಹಿಂದೂಗಳು ಈ ಪ್ರಯೋಜನ ಪಡೆಯುವಂತಿಲ್ಲ. ಇದರಿಂದಾಗಿ ಹಣಕ್ಕಾಗಿ ಮತಾಂತರವಾಗುವ ಸಾಧ್ಯತೆ ಇದೆ. ಅಲ್ಲದೇ ನ್ಯಾಯಾಲಯದ ಆದೇಶವಿದ್ದರೂ ಸಹ ಅದನ್ನು ಉಲ್ಲಂಘಿಸಿ ಮಸೀದಿಗಳ ಮೇಲೆ ಧ್ವನಿಕ್ಷೇಪಣಾ ಯಂತ್ರಗಳ ಸಹಾಯದಿಂದ ಬೆಳಿಗ್ಗಿನ ಅಜಾನ ಕೂಗುವುದನ್ನು ಸ್ಥಗಿತಗೊಳಿಸಬೇಕು ಹಾಗೂ ದೇಶದ ಎಲ್ಲಾ ಮಸೀದಿ ಮೇಲಿರುವ ಧ್ವನಿವರ್ಧಕಗಳ ವಿವರ ಪಡೆದು ಅವುಗಳನ್ನು ತೆಗೆದು ಹಾಕುವ ಕಾರ್ಯಕ್ಕೆ ಮುಂದಾಗಬೇಕು ಎಂದೂ ಆಗ್ರಹಿಸಲಾಗಿದೆ.
ಮನವಿಯನ್ನು ಸಹಾಯಕ ಆಯುಕ್ತರ ಅನುಪಸ್ಥತಿಯಲ್ಲಿ ಕಚೇರಿಯ ವಿಜಯಲಕ್ಷ್ಮೀ ಮಣಿಯವರು ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗುರು ಸಾಣಿಕಟ್ಟಾ, ನಾಗರಾಜ ವಿ. ನಾಯ್ಕ, ರಂಗ ಪ್ರಭು, ಶನಿಯಾರ ನಾಯ್ಕ, ದತ್ತಾತ್ರೇಯ ನಾಯ್ಕ, ಸಂದೀಪ, ಶಿವ ಕುಮಾರ್, ಶ್ರೀಧರ ಹರಿಕಾಂತ, ಸೋಮೇಶ ಗುರವ, ಪುಂಡಲೀಕ ಪೈ, ದಯಾನಂದ ಪ್ರಭು, ಸುಧಾಕರ ಮಹಾಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a Comment