ದಾಂಡೇಲಿ :
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಪಾಟೀಲ ಮತ್ತು ಪಕ್ಷದ ಮುಖಂಡ ಅರ್ಜುನ ನಾಯ್ಕ ಅವರುಗಳು ನರೇಂದ್ರ ಮೋಧಿಯವರ ನೇತೃತ್ವದ ಕೇಂದ್ರ ಸರಕಾರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶ್ವದ ಗಮನ ಸೆಳೆದಿದೆ. ಬಹು ಸಂಖ್ಯಾತ ಹಿಂದುಗಳ ಆರಾಧ್ಯ ದೈವವಾದ ಗೋವುಗಳ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಬಿಜೆಪಿ ಎಸ್.ಸಿ ಮೋರ್ಚಾದ ನಗರದ ಘಟಕದ ಅಧ್ಯಕ್ಷ ದಶರಥ ಬಂಡಿವಡ್ಡರ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಸಂಚಾಲಕ ಶಂಕರ ಗಣಾಚಾರಿ, ಪಕ್ಷದ ಮುಖಂಡರುಗಳಾದ ಪ್ರಶಾಂತ ಬಸೂರ್ತೆಕರ, ವಿಷ್ಣು ವಾಜ್ವೆ, ರವಿ ಗಾಂವಕರ, ಸತೀಶ ಗೌರ್, ಮುಕುಲ್.ವಿ.ವ್ಯಾಸ್, ರವಿ ಕಾಮತ್, ಗೌರೀಶ ಬಾಬ್ರೇಕರ, ವಿಷ್ಣು ನಾಯರ್, ಭೀಮಶಿ ಬಾದೂಲಿ, ವಿನಾಯಕ ಹರಿಜನ ಮೊದಲಾದವರು ಉಪಸ್ಥಿತರಿದ್ದರು.
Leave a Comment