ಕಾರವಾರ:
ಕದಂಬ ನೌಕಾನೆಲೆಯೊಳಗೆ ಅನಧಿಕೃತ ಪ್ರವೇಶ ಮಾಡಿದ ಕಾರಣ ವ್ಯಕ್ತಿಯೊರ್ವನನ್ನು ಬಂಧಿಸಿದ ನೌಕಾಪಡೆ ಅಧಿಕಾರಿಗಳು ಬಂಧಿತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುದಗಾದ ಪ್ರಥ್ವಿರಾಜ ಅರ್ಗೇಕರ್ (27) ಎಂಬಾತರು ನೌಕಾನೆಲೆ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ನೌಕಾನೆಲೆ ಅಧಿಕಾರಿಗಳು ಮೀನುಗಾರನನ್ನು ಬಂಧಿಸಿದರು. ವಿಚಾರಣೆ ನಡೆಸಿದ ನಂತರ ಬಂಧಿತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Leave a Comment