ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುವುದನ್ನು ಖಂಡಿಸಿ ಮತ್ತು ನಗರದ ಚರಂಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನಗೆ ಸೋಮವಾರ ಮನವಿ ಸಲ್ಲಿಸಿದರು.
ಕಾರವಾರದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುತ್ನ್ನು ಯಾವುದೇ ಮುನ್ಸೂಚನೆ ಇಲ್ಲದೆ ನಿರಂತರವಾಗಿ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜನಸಮಾನ್ಯರು ಸೇರಿದಂತೆ ಅಂಗಡಿ ಹಾಗೂ ಇತರೆ ವ್ಯವಹಾರ ನಡೆಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆ, ಮಳೆ ಗಾಳಿಯಿಂದ ಕಡಿತವಾಗುತ್ತಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ಹೆಸ್ಕಾನವರು ಮಳೆಗಾಲ ಪೂರ್ವದಲ್ಲಿ ಸರಿಯಾಗಿ ಕಾಮಗಾರಿ ಹಾಗೂ ಸಿದ್ದತೆ ನಡೆಸದೇ ಪ್ರತಿ ವರ್ಷವೂ ಇದೆ ರಿತಿ ತೊಂದರೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರುದ್ದಾರೆ.
ನಗರಸಭೆಯು ಪ್ರತಿ ವರ್ಷವೂ ಮಳೆಗಾಲ ಪೂರ್ವದಲ್ಲಿ ಒಣಚರಂಡಿಗಳ ಹೂಳನ್ನು ಅರೆಬರೆಯಾಗಿ ಎತ್ತಿ ಕೈತೊಳೆದುಕೊಳ್ಳುತ್ತಿದೆ. ಆದರೆ ಇದರಿಂದ ಮಳೆಗಾದಲ್ಲಿ ಜನಸಾಮಾನ್ಯರ ಮನೆ ರಸ್ತೆಗಳಲ್ಲಿ ನೀರು ನುಗ್ಗುತ್ತಿದ್ದು, ಇದಕ್ಕೆ ಅಧಿಕಾರಿಗಳೆ ನೇರ ಹೊಣೆಯಾಗುತ್ತಿದ್ದಾರೆ. ಅದರಂತೆ ಪ್ರಸಕ್ತ ವರ್ಷದ ಬೇಸಿಗೆ ಆರಂಭಕ್ಕೂ ಮುನ್ನ ಚರಂಡಿಯಲ್ಲಿ ಹೂಳು ಎತ್ತಲಾಗುತ್ತಿದೆಯಾದರು ಬಹುತೇಕ ಎತ್ತಿರುವ ಹೂಳುಗಳನ್ನು ಚರಂಡಿ ಬದಿ ಹಾಗೆ ಬಿಡಲಾಗಿದೆ. ಇದರಿಂದ ಕಳೆದ ಮಳೆಗೆ ಕೆಲ ಭಾಗದಲ್ಲಿ ಮತ್ತೆ ಚರಂಡಿ ಸೇರಿದ್ದು, ಇನ್ನು ಕೆಲ ಭಾಗಗಳಲ್ಲಿ ಅರಬರೆ ಕಾಮಗಾರಿ ನಡೆಸಿ ನಿರ್ಲಕ್ಷ್ಯವಹಿಸಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಹಾಗೂ ನಗರದ ಒಳಚರಂಡಿಗಳನ್ನು ಸಂಪೂರ್ಣ ಹೂಳು ತೆಗೆಯಲು ಸೂಚನೆ ನೀಡಬೇಕು. ಆಮೂಲಕ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ದೀಲಿಪ ಅರ್ಗೇಕರ್, ಜಿಲ್ಲಾಮಹಿಳಾಅಧ್ಯಕ್ಷೆ ದಿವ್ಯಾ ಡಿ ನಾಯ್ಕ, ಪ್ರದಾನ ಕಾರ್ಯದರ್ಶಿ ದೇವಿದಾಸ ನಾಯ್ಕ, ಸುಭಾಸ್ ಗುನಗಿ, ನಿಲೇಶ ದಾಮ್ಸಡಿಕರ್, ನಾಗಪ್ರಸಾದ ಪಿ ರಾಯ್ಕರ್ ಇದ್ದರು.
Leave a Comment