ಕಾರವಾರ:
ನಂದನಗದ್ದಾದ ಅಂಬೇಡ್ಕರ ಕಾಲೋನಿಯಲ್ಲಿರುವ ದಲಿತ ಬಿಜೆಪಿ ಕಾರ್ಯಕರ್ತೆ ಮಾಲಾ ಹುಲಸ್ವಾರ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಉಪಹಾರ ಸೇವಿಸಿದರು.
ಯಡಿಯೂರಪ್ಪನವರಿಗಾಗಿಯೇ ವಿಶೇಷವಾಗಿ ಸಿದ್ದಪಡಿಸಿದ್ದ ಇಡ್ಲಿ ಹಾಗೂ ಉಪ್ಪಿಟ್ಟು ಸೇವನೆಯಲ್ಲಿ ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಜೊತೆಯಾದರು. ಮದ್ಯಾಹ್ನ 12 ಗಂಟೆಗೆ ಉಪಹಾರ ಸೇವಿಸಿದ ಯಡಿಯೂರಪ್ಪ ಮನೆಯವರೇ ತಯಾರಿಸಿದ್ದ ಇಡ್ಲಿ ಹಾಗೂ ಸಾಂಬಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಾದ ಮೇಲೆ ಕಷಾಯ ಸ್ವೀಕರಿಸಿದರು. ನಂತರ ಅಲ್ಲೇ ಸಮೀಪದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ದಲಿತರ ಸಮಸ್ಯೆ ಆಲಿಸಿದರು. ಇದಕ್ಕೂ ಮುನ್ನ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೇಂದ್ರ ಸರ್ಕಾರ ಮಹಿಳೆ ಹಾಗೂ ದಲಿತರ ಅಭಿವೃದ್ದಿಗಾಗಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಅದನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು. ಇದಕ್ಕೂ ಮೊದಲು ಬಾಡ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಎಲ್ಲಡೆ ಮಹಿಳೆಯರು ಆರತಿ ಎತ್ತಿ ಯಡಿಯೂರಪ್ಪನವರನ್ನು ಬರ ಮಾಡಿಕೊಂಡರು. ಸಂಸದ ಅನಂತಕುಮಾರ ಹೆಗಡೆ ಇನ್ನಿತರರು ಅವರ ಜೊತೆಯಿದ್ದರು.
Leave a Comment