ದಾಂಡೇಲಿ:
ಗುತ್ತಿಗೆ ಪೌರ ಕಾರ್ಮಿಕರ ಬೇಡಿಕೆಗಳಿಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದರಿಂದ ಜೂನ್ 12 ರಿಂದ ರಾಜ್ಯದಾದ್ಯಂತ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ ಎಂದು ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ರಾಜ್ಯಾದ್ಯಕ್ಷ ಹರೀಶ ನಾಯ್ಕ ತಿಳಿಸಿದರು.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಈ ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಅಧಿಕಾರಕ್ಕೆ ಬಂದ ನಂತರ ಬಜೆಟ್ನಲ್ಲೂ ಘೊಷಣೆ ಮಾಡಿತ್ತು. ಆದರೆ ಈ ಯಾವ ಭರವಸೆಗಳು ಈಡೇರಿಲ್ಲ. ಪೌರ ಕಾರ್ಮಿಕರ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟು ಕೊಂಡು ಹಲವು ಬಾರಿ ಸರಕಾರದ ಗಮನ ಸೆಳೆಯಲಾಗಿತ್ತು. ಅದರ ಭಾಗವಾಗಿ ನಗರಾಭಿವೃದ್ದಿ ಸಚಿವ ರೋಶನ್ ಬೇಗ, ಬೆಂಗಳೂರು ಮಹಾನಗರ ಪಾಲಿಕೆ ಸಚಿವ ಜಾರ್ಜ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಮುಂತಾದವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಪ್ರತಿನಿಧಿಯಾಗಿ ನಾನು ಸೇರಿದಂತೆ ಸಪಾಯಿ ಕಾರ್ಮಿಕ ಸಂಘಟನೆಯ ವೆಂಕಟೇಶ, ನಾರಾಯಣ ಮುಂತಾದವರಿದ್ದರು. ಈ ಸಭೆಯಲ್ಲಿ ಗುತ್ತಿಗೆ ಪದ್ದತಿಯನ್ನು ಕೈಬಿಡುವಂತೆ, ಸ್ಥÀಳೀಯ ಸಂಸ್ಥೆಗಳ ಮೂಲಕವೇ ವೇತನ ಪಾವತಿಸುವಂತೆ, ಖಾಯಂಗೊಳಿಸುವಂತೆ ಒತ್ತಾಯಿಸಲಾಯಿತು. ಆದರೆ ಈ ಬೇಡಿಕೆ ಈಡೇರಿಸಲು ಸರಕಾರದ ಪ್ರತಿನಿದಿಗಳು ಮೀನಾಮೇಶ ಎಣಿಸಿದರು.
ರಾಜ್ಯದಾದ್ಯಂತ 75 ಸಾವಿರದಷ್ಟು ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸರಕಾರ ಪ್ರತೀ ಪೌರಕಾರ್ಮಿಕರಿಗೆ ಕನಿಷ್ಠ ವೇತನ ರೂ: 17760 ರೂ ಘೋಷಿಸಿದೆಯಾದರೂ ಅದು ಸಮರ್ಪಕವಾಗಿ ಪೌರ ಕಾರ್ಮಿಕರಿಗೆ ತಲುಪುತ್ತಿಲ್ಲ. ಗುತ್ತಿಗೆದಾರರು ನಡುವೆ ಈ ಹಣ ಹೊಡೆಯುತ್ತಿದ್ದಾರೆ. ಕೆಲವರಿಗೆ ವೇತನ ಪಾವತಿಸಿ ಅವರಿಂದ ಹಣ ಮರಳಿ ಪಡೆಯಲಾಗುತ್ತದೆ. ಮತ್ತೆ ಕೆÀಲ ಗುತ್ತಿಗೆದಾರರು ಕಾರ್ಮಿಕರ ಎ.ಟಿ.ಎಮ್ನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿಲ್ಲ. ಇದು ಗುತ್ತಿಗೆದಾರರ ಮೂಲಕ ಸರಕಾರವನ್ನು ದರೋಡೆ ಮಾಡುವಂತ ಒಂದು ದೊಡ್ಡ ಭೃಷ್ಠಚಾರವಾಗಿದೆ ಎಂದು ಆರೋಪಿಸಿದರು.
ಸರಕಾರ ಇದೀಗ ಸೊಸೈಟಿಗಳನ್ನು ರಚಿಸಿ, ಆಮೂಲಕ ಪೌರ ಕಾರ್ಮಿಕರನ್ನು ಕೆಲಸ ಮಾಡಿಸಿ ಎಂಬ ಸಲಹೆ ನೀಡುತ್ತಿದೆ. ಇದು ಮತ್ತೊಂದು ಭೃಷ್ಠಚಾರಕ್ಕೆ ಎಡೆ ಮಾಡಿಕೊಡುವ ದಾರಿಯಾಗಿದೆ. ಇದನ್ನು ಪೌರ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಇದೀಗ ಸರಕಾರ ಜೂನ್ 19 ರಂದು ಮತ್ತೆ ಸಭೆ ಕರೆದು ಚರ್ಚಿಸುವುದಾಗಿ ಹೇಳಿದೆ. ಆದರೆ ಆಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಗಮನ ಸೆಳೆಯುವುದಕ್ಕಾಗಿ ಜೂನ್ 12 ರಿಂದಲೇ ನಾವು ರಾಜ್ಯದಾದ್ಯಂತರ ಮುಷ್ಕರ ಹಮ್ಮಿಕೊಂಡಿದ್ದೇವೆಂದರು.
ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾದ್ಯಕ್ಷ ಡಿ. ಸ್ಯಾಮಸನ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಜು. 12 ರಂದು ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಜಿಲ್ಲೆಯ ಉಳಿದೆಲ್ಲೆಡೆ ಧರಣಿ ಹಾಗೂ ಮನವಿ ನೀಡುವ ಮೂಲಕ ಸರಕಾರದ ಗಮನ ಸೆಳೆಯಲಾಗುತ್ತದೆ. ದಾಂಡೇಲಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರ ಮೇಲೆ ಗುತ್ತಿಗೆದಾರರಿಂದ ದಬ್ಬಾಳಿಕೆ ನಡೆಯುತ್ತಿದೆ. ಈಗಾಗಲೇ ಸಕಾರಣವಿಲ್ಲದೇ 12 ಜನರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಹುಬ್ಬಳ್ಳಿ ಜನರನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ನಗರಾಡಳಿತದ ಗಮನಕ್ಕೆ ತಂದರೂ ಗಮನ ಹರಿಸುತ್ತಿಲ್ಲ. ಈಗಾಗಲೇ ನಮ್ಮ ಹೋರಾಟದ ಭಾÀಗವಾಗಿ ಜಿಲ್ಲಾಧಿಕಾರಿಗಳು ಜೂನ 16 ರಂದು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ದಾಂಡೇಲಿಯಲ್ಲಿ ವಜಾಗೊಂಡ ಗುತ್ತಿಗೆ ಕಾರ್ಮಿಕರ ವಿಷಯವನ್ನೂ ಚರ್ಚಿಸಲಾಗುವುದು. ನ್ಯಾಯ ಸಿಗದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು. ಸುದ್ದಿ ಗೋಷ್ಠಿಯಲ್ಲಿ ಮಂಜುನಾಥ ಪುಲಕರ ಉಪಸ್ಥಿತರಿದ್ದರು.
Leave a Comment