ಕಾರವಾರ:
ಮಸಿದಿಗಳ ಮೇಲೆ ಅಳವಡಿಸಿರುವ ಅನಧಿಕೃತ ದ್ವನಿ ವರ್ದಕ ತೆರವು ಮಾಡುವಂತೆ ಆಗ್ರಹಿಸಿ ದೂರು ನೀಡಿದರೂ ಕ್ರಮ ಜರುಗಿಸದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ದ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಯಲ್ಲಾಪುರದ ಶಿವ ಪಾರ್ವತಿ ಸದನದಲ್ಲಿ ತಾವು ವಾಸಿಸುತ್ತಿದ್ದು ಮನೆಯ ಹತ್ತಿರ ನಾಲ್ಕು ಮಸಿದಿಗಳಿವೆ. ಅವುಗಳು ಬಳಸುವ ದ್ವನಿ ವರ್ದಕಗಳಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದರೂ ಯಾವದೇ ಕ್ರಮ ಜರುಗಿಸಿಲ್ಲ ಎಂದು ಮಂಗೇಶ ಕೈಸರೆ ಎಂಬಾತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಯಲ್ಲಾಪುರ ಸಿಪಿಐ ವಿಜಯ ಬಿರಾದರ ಹಾಗೂ ಪಿಸೈ ಎಸ್.ಆರ್ ಶ್ರೀಧರ ವಿರುದ್ದ ಖಾಸಗಿ ದೂರು ನೀಡಿದ್ದಾರೆ. ಮಸಿದಿಗಳ ಮೇಲೆ ಅಳವಡಿಸಿರುವ ದ್ವನಿ ವರ್ದಕಗಳು ಬೆಳಗ್ಗೆ 4.30ಕ್ಕೆ ಕೂಗಿಸುವದರಿಂದ ತಮಗೆ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ. ಅಕ್ರಮವಾಗಿ ಅಳವಡಿಸಿರುವ ದ್ವನಿ ವರ್ದಕಗಳನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕೂಡಲೇ ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
Leave a Comment