ದಾಂಡೇಲಿ;
ನಗರದ ಪತಾಂಜಲಿ ಯೋಗ ಸಮಿತಿ, ಬಂಗೂರುನಗರ ಪದವಿ ಕಾಲೇಜ್, ಎನ್.ಎಸ್.ಎಸ್.ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಯೋಗ ದಿನಾಚರಣೆ ಕಾರ್ಯಕ್ರಮವನ್ನು ನಗರದ ರಂಗನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಬಂಗೂರುನಗರ ಪದವಿ ಕಾಲೇಜಿನ ಪ್ರಾಚರ್ಯೆ ಡಾ:ಶೋಭಾ ಶರ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಸಭೆಯ ಮಾಜಿ ಅಧ್ಯಕ್ಷೆ ದೀಪಾ ಮಾರಿಹಾಳ, ವಕೀಲರ ಸಂಘದ ಅಧ್ಯಕಗಷ ಎಸ್.ಎಂ.ದಬಗಾರ, ಗುತ್ತಿಗೆದಾರ ಸುಹಿಲ್ ದುಸಗಿ, ಆರ್.ಎಸ್.ಎಸ್ ಸಂಚಾಲಕ ಶ್ರೀನಿವಾಸ ಪ್ರಭು ಭಾಗವಹಿಸಿದ್ದರು.
ಯೋಗ ಸಮಿತಿಯ ನುರಿತ ಯೋಗ ಗುರುಗಳಾದ ಎನ್.ಬಿ.ಪತ್ತಾರ, ರೇವತಿ ಪರಾಂಜಪೆ, ಕವಿತಾ ಪೂಜಾರ ಯೋಗ ಮಾಹಿತಿ ಹಾಗೂ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪತಾಂಜಲಿ ಆರೋಗ್ಯ ಕೇಂದ್ರ ಹಾಗೂ ಯೋಗ ಸಮಿತಿಯ ತಾಲೂಕು ಪ್ರಭಾರಿ ದೇವಿದಾಸ ಥಾಮ್ಸೆ ಸ್ವಾಗತಿಸಿದರು. ಕೆ.ಜಿ.ವರ್ಣೇಕರ ವಂದಿಸಿದರು. ಡಾ: ಬಿ.ಎಲ್.ಗುಂಡೂರ ಕಾರ್ಯಕ್ರಮ ನಿರೂಪಿಸಿದರು.
21ದಾಂಡೇಲಿ2- ದಾಂಡೇಲಿಯಲ್ಲಿ ಬಂಗೂರುನಗರ ಪದವಿ ಕಾಲೇಜಿನ ಪ್ರಾಚರ್ಯೆ ಡಾ:ಶೋಭಾ ಶರ್ಮಾ ಅವರು ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು.
Leave a Comment