ಕಾರವಾರ:
ಕೈಗಾದ ಮುಖ್ಯದ್ವಾರದಲ್ಲಿರುವ ಎಟಿಎಂ ಮುಂಭಾಗ ಬಿದ್ದಿದ್ದ 10 ಸಾವಿರ ರೂ ಹಣ ಗಮನಿಸಿದ ಕೈಗಾ ಉದ್ಯೋಗಿಯೊಬ್ಬರು ಅದನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಉದಯರಾಜ್ ಎಂಬಾತರಿಗೆ 500ರ 20 ನೋಟುಗಳು ದೊರಕಿದ್ದವು. ಗುಪ್ತದಳದ ದೀಪಕರನ್ನು ಸಂಂಪರ್ಕಿಸಿದ ಉದಯರಾಜ್, ವಾರಸುದಾರರಿಗೆ ತಲುಪಿಸಲು ಸಹಾಯ ಮಾಡುವಂತೆ ಕೇಳಿಕೊಂಡರು. ನಂತರ ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ಮೆನೆಜರ್ ಎನ್. ದೀಕ್ಷಿತ್ ಮೂಲಕ ಹಣದ ವಾರಸುದಾರರನ್ನು ಪತ್ತೆ ಮಾಡಲಾಯಿತು. ಎನ್.ಪಿ.ಸಿ.ಐ.ಎಲ್ನ ಕರ್ಮಚಾರಿ ಗಜಾನನ ನಾಯ್ಕ ಎಂಬಾತರಿಗೆ ಸೇರಿದ ಹಣ ಎಂದು ಖಚಿತಪಡಿಸಿಕೊಂಡ ನಂತರ ಅದನ್ನು ಅವರಿಗೆ ಹಸ್ತಾಂತರಿಸಲಾಯಿತು.
Leave a Comment