• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾರ್ವಜನೀಕರ ಸಹಕಾರ ಅತಿ ಮುಖ್ಯ,ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ

July 25, 2017 by Sachin Hegde Leave a Comment

ಹಳಿಯಾಳ:

ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೋಲಿಸರು ಸದಾ ಕಾರ್ಯಪ್ರವೃತ್ತರಾಗಿದ್ದು ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೋಲಿಸರು ಸಂಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೇ ಸಾರ್ವಜನೀಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೇಳಿದರು.
ಹಳಿಯಾಳ ಪೋಲಿಸ್ ಇಲಾಖೆಯಿಂದ ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಪರಿಷ್ಕøತ ಪೋಲಿಸ್ ಬೀಟ್ ವ್ಯವಸ್ಥೆಯ ಕುರಿತು ಹಾಗೂ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಸಾರ್ವಜನೀಕರ ಸಹಕಾರದ ಕುರಿತು ನಡೆದ ಮಹತ್ವಪೂರ್ಣ ಸಭೆಯಲ್ಲಿ ಅವರು ಮಾತನಾಡಿದರು.
ಈ ಮೊದಲು ಪೋಲಿಸ್ ಬೀಟ್ ಕಡಿಮೆ ಇದ್ದವು ಪ್ರಸ್ತುತ ಬದಲಾದ ವಾತಾವರಣ, ಜನಸಂಖ್ಯೆ, ಪಟ್ಟಣದ ವಿಸ್ತಾರದಿಂದ ಬೀಟ್‍ಗಳನ್ನು ಹೆಚ್ಚಿಸಲಾಗಿದ್ದು ಪ್ರತಿ ಹಳ್ಳಿಗೆ ಒಬ್ಬರಂತೆ ಹಾಗೂ ಪಟ್ಟಣಗಳಲ್ಲಿ ವಾರ್ಡಗಳಿಗೆ ಒಬ್ಬರಂತೆ ಬಿಟ್‍ಗೆ ಸಿಬ್ಬಂದಿಗಳನ್ನು ನೇಮಿಸಿ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು ಸಾರ್ವಜನೀಕರು ಏನೆ ತೊಂದರೆ ಇದ್ದರೇ, ಯಾವುದೇ ಹೊಸ ವ್ಯಕ್ತಿಯ ಕುರಿತು ಸಂದೇಹ ಬಂದರೇ, ಅಪರಾಧ ಕೃತ್ಯ ನಡೆಯುವ ಸಂಶಯವಿದ್ದರೇ, ಕಳ್ಳತನ, ಮೊದಲಾದ ಪ್ರಕರಣಗಳ ಕುರಿತು ತಿಳಿದು ಬಂದರೇ ತಕ್ಷಣ ಬೀಟ್ ಪೋಲಿಸ್‍ರನ್ನು ಸಂಪರ್ಕಿಸುವಂತೆ ಕರೆ ನೀಡಿದರು.
ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಸದಸ್ಯರಾದ ಶ್ರೀಕಾಂತ ಹೂಲಿ, ಸುಬಾನಿ ಹುಬ್ಬಳ್ಳಿ, ಸತ್ಯಜೀತ ಗಿರಿ ಮಾತನಾಡಿ ಹಳಿಯಾಳ ಪಟ್ಟಣ ವ್ಯಾಪ್ತಿ 60 ಕೀಮಿ ಇದ್ದು ಪುರಸಭೆಯಿಂದ ಹಳಿಯಾಳದಲ್ಲಿ ಒಟ್ಟೂ 26 ಸಿಸಿಟಿವಿ ಕ್ಯಾಮೇರಾಗಳನ್ನು ಅಳವಡಿಸಲಾಗಿದ್ದು ಇನ್ನೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಚಿಂತನೆ ಇದೆ ಎಂದರು.
ಹಿರಿಯ ಮುಖಂಡ ರಾಜು ಧೂಳಿ, ಜಿಡಿ ಗಂಗಾಧರ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ ಮೊದಲಾದ ಪ್ರಮುಖರು ಮಾತನಾಡಿ ಹಳಿಯಾಳ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಹಳಿಯಾಳ ಠಾಣೆಗೆ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳ ಅವಶ್ಯಕತೆ ಇದೆ ಹಾಗೂ ಸಾರ್ವಜನೀಕರು ಪೋಲಿಸರನ್ನು ದೂರುವ ಮೊದಲು ತಾವು ಎಚ್ಚೆತ್ತುಕೊಂಡಿದ್ದರೇ ಒಳಿತು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಅರುಣ ಬೋಬಾಟಿ, ಸದಸ್ಯೆ ಮಾಲಾ ಬ್ರಗಾಂಜಾ, ದಲಿತ ಮುಖಂಡ ಚಂದ್ರು ಕಲಬಾವಿ ಇದ್ದರು. ಸಿಪಿಐ ಪ್ರದೀಪ ಹೊಳೆನ್ನವರ ಸ್ವಾಗತಿಸಿದರು. ಪಿಎಸ್‍ಐ ಎಮ್..ಎಸ.ಹೂಗಾರ್ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅತಿ, ಅಪರಾಧ, ಕಳ್ಳತನ, ಕೃತ್ಯ, ಗೋಪಾಲ ಬ್ಯಾಕೋಡ, ಪೋಲಿಸ್, ಪೋಲಿಸ್ ಬೀಟ್, ಪ್ರಕರಣ, ಮುಖ್ಯ, ಮುನ್ನೆಚ್ಚರಿಕೆ, ಮೊದಲಾದ, ಯಶಸ್ವಿ, ವರಿಷ್ಠಾಧಿಕಾರಿ, ಸಂಶಯವಿದ್ದರೇ, ಸಹಕಾರ, ಸಾರ್ವಜನೀಕರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar