ಕಾರವಾರ:
ಶಾಲಾ ಮಕ್ಕಳಲ್ಲಿ ಪರಿಸರದ ಆಸಕ್ತಿಯನ್ನು ಮೂಡಿಸಲು ರೋಟರಿ ಕ್ಲಬ್ ವತಿಯಿಂದ ಮಕ್ಕಳಿಗೆ ಸಾವಿರ ಹಣ್ಣಿನ ಸಸಿಗಳನ್ನು ವಿತರಿಸಲಾಗಿದೆ.
ಹಿಂದೂ ಪ್ರೌಢ ಶಾಲೆ, ಯುನಿಟಿ ಪ್ರೌಢ ಶಾಲೆ ಹಾಗೂ ಸೈಂಟ್ ಜಾಸೆಫ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಉಪನ್ಯಾಸ ನೀಡಿ ಸಸಿಗಳನ್ನು ನೀಡಲಾಯಿತು. ಇದಲ್ಲದೇ ಉತ್ತಮ ಪಾಲನೆ ಮಾಡಿದವರಿಗೆ ಬಹುಮಾನ ನೀಡುವದಾಗಿಯೂ ರೋಟರಿ ಕ್ಲಬ್ ಘೋಷಿಸಿದೆ.
ರೋಟರಿ ಕ್ಲಬ್ನ ಅಧ್ಯಕ್ಷ ರಾಜೇಶ್ ವೆರ್ಣೆಕರ, ಹಿಂದು ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ, ರೋಟರಿ ಕ್ಲಬ್ನ ಸಮುದಾಯ ನಿರ್ದೇಶಕ ಎಮ್. ಪಿ. ಕಾಮತ, ಕಾರ್ಯದರ್ಶಿ ಸಾತಪ್ಪಾ ತಾಂಡೇಲ ಹಿಂದೂ ಹೈಸ್ಕೂಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುನಿಟಿ ಪ್ರೌಢ ಶಾಲೆಯಲ್ಲಿ ಪ್ರಾಧ್ಯಾಪಕಿ ಬಶೀರಾ ಶೇಖ್, ಶಾಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಬುಖಾರಿ, ಸೈಂಟ್ ಜಾಸೆಫ್ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಲಿಸಿ ಥೊಮಸ್, ಪದವಿ ಪೂರ್ವ ಶಾಲೆಯ ಪ್ರಾಂಶುಪಾಲ ಫಾದರ್. ಸ್ಟ್ಯಾನಿ ಪಿಂಟೊ, ರೋಟರಿ ಕ್ಕಬ್ನ ಸದಸ್ಯ ಅಮರನಾಥ ಶೆಟ್ಟಿ, ಪ್ರದೀಪ ನಾಯ್ಕ, ಸೂರಜ ಗಾಂವಕರ, ನಾಗರಾಜ ಜೋಷಿ, ರಾಘವೇಂದ್ರ ಪ್ರಭು, ಮಿನಿನ್ ಪುಡತಾಡೊ, ಎಲ್. ಎಸ್. ಫರ್ನಾಂಡಿಸ್, ಸುನಿಲ ಸೋನಿ, ಅಶೋಕ ಗಾಂವಕರ, ವಿನೋದ ಪಾವಸ್ಕರ್, ರಾಮಚಂದ್ರ ಪಡವಲಕರ, ಸೂರಜ ಜೋಗಳೇಕರ, ಕನ್ನನ್ ಮೆನನ್, ಸುರೇಶ ನಾಯ್ಕ, ಕಿಶನ್ ಪಡವಲಕರ್, ಇನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಸುಶಿಲಾ ಗಾಂವಕರ, ಅರ್ಚನಾ ಶೆಟ್ಟಿ, ಮಾರಿಯಾ ಡಾಯಸ ಇದ್ದರು.
Leave a Comment