ಕಾರವಾರ: ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕಾಗಿದ್ದ ಸುರಂಗ ಮಾರ್ಗ ಕೆಲವು ದೋಷಗಳಿಂದ ಕಾಮಗಾರಿ ಸ್ಥಗಿತವಾಗಿದ್ದು ಕಾಮಗಾರಿ ಮುಂದುವರಿಸಲು ಮಳೆಗಾಲದ ಮುಕ್ತಾಯದವರೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಳೆ ಕಡಿಮೆಯಿದ್ದರೂ ಸುರಂಗ ಕಾಮಗಾರಿ ಮುಂದುವರೆದಿಲ್ಲ.
ಅಲಿಗದ್ದಾದಿಂದ ಅಲಿಗದ್ದಾ ಲಂಡನ್ ಬ್ರಿಡ್ಜ್ ಬಳಿಯ ಗುಡ್ಡದ ಬಳಿಕ ಮುಕ್ತಾಯವಾಗಬೇಕಾಗಿದ್ದ ಸುರಂಗ ನಿರ್ಮಾಣ ಕಾರ್ಯ ಇನ್ನಷ್ಟು ವಿಳಂಭವಾಗಲಿದೆ. ಈ ಬೃಹತ್ ಗುಡ್ಡದ ಅಡಿಯಿಂದ ಚತುಷ್ಪಥ ಹೆದ್ದಾರಿಯಲ್ಲಿ ದ್ವಿಪಥ ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕಾಗಿ 1.5ಕಿ.ಮೀ ಉದ್ದದ ಎರಡು ಸುರಂಗ ಮಾರ್ಗ ನಿರ್ಮಿಣಗೊಳ್ಳುತ್ತಿದೆ. ಅಲಿಗದ್ದಾದ ಎಸ್ಬಿಐ ಕಚೇರಿ, ಬಂದರು ಇಲಾಖೆಯ ಕಚೇರಿಯ ಹಿಂಭಾಗದ ಸಮೀಪದಲ್ಲಿಯೇ ಇರುವ ಈ ಗುಡ್ಡದ ಬೃಹತ್ ಬಂಡೆಗಲ್ಲಿಗೆ ರಂದ್ರಕೊರೆಯಲಾಗಿದೆ. ಅಲಿಗದ್ದಾದಿಂದ ಜಿಲ್ಲಾಧಿಕಾರಿ ಬಂಗ್ಲೆಯ ಕಳೆಭಾಗದಿಂದ ಹಾಗೂ ಬಿಣಗಾದಿಂದ ಅಲಿಗದ್ದಾದ ಮುಖಭಾಗಕ್ಕೆ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಆದರೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಒಂದು ಸುರಂಗ ಮಾರ್ಗ ಸರಿಯಾಗಿದ್ದು ಇನ್ನೊಂದು ಸುರಂಗ ಮಾರ್ಗ ನಿರ್ಮಿಸುವಾಗ ಮಧ್ಯದಲ್ಲಿ ಮಣ್ಣು ಕುಸಿತವಾಗುತ್ತಿದೆ.
ಸುರಂಗ ಕೊರೆಯುವ ಸಲುವಾಗಿ ಹಿಂದೆ ಸ್ಪೋಟಕಗಳನ್ನು ಬಳಸಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆ ಸುರಂಗ ಮಾರ್ಗ ಮಧ್ಯ ನೀರಿನ ಸಮೇತ ಮಣ್ಣು ಸುರಂಗದೊಳಗೆ ಬಂದಿದ್ದರಿಂದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇನ್ನೊಂದು ಭಾಗದ ಸುರಂಗದ ಕಾರ್ಯ ನಿಲ್ಲಿಸಲಾಗಿದ್ದು ಐಆರ್ಬಿ ಸುರಂಗ ನಿರ್ಮಾಣ ಕಾರ್ಯ ಮುಂದುವರಿಸಬೇಕಾದರೆ ಸಂಪೂರ್ಣವಾಗಿ ಮಳೆಗಾಲ ಮುಗಿಯುವತನಕ ಕಾಯಬೇಕಾಗಿದೆ. ಇದರಿಂದ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಏಕೈಕ ಸರಂಗ ಮಾರ್ಗ ಸಾರ್ವಜನಿಕರ ಸೇವೆ ಇನ್ನಷ್ಟು ತಡವಾಗಿ ಲಭ್ಯವಾಗಲಿದೆ. ಸುರಂಗ ಮಾರ್ಗ ಕೋರೆಯವಾಗ ಅನೇಕ ರೀತಿಯಲ್ಲಿ ತೊಂದರೆಗಳನ್ನು ಕಾಮಗಾರಿ ನಡೆಸುವ ಗುತ್ತಿಗೆದಾರರು ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಪ್ರಾರಂಭದಿಂದಲೇ ಕೇಳಿಬಂದಿದ್ದವು. ಗುಡ್ಡದ ಬೃಹತ್ ಬಂಡೆಗಲ್ಲುಗಳನ್ನು ಸ್ಫೋಟಕಗಳನ್ನು ಬಳಿಸಿಯೇ ಸಿಡಿಸಬೇಕಾಗಿದ್ದರಿಂದ ಸುತ್ತಮುತ್ತಲಿನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಐಆರ್ಬಿ ಕಂಪೆನಿಯವರು ಅಲಿಗದ್ದಾ ಮಾರ್ಗವಾಗಿ ಎರಡು, ಬಿಣಗಾ ಕಡೆಯಿಂದ ಪ್ರಯಾಣಿಸಲು ಒಟ್ಟು ನಾಲ್ಕು ಸುರಂಗ ಮಾರ್ಗವನ್ನು ನಿರ್ಮಿಸುತ್ತಿದೆ. ಇಲ್ಲಿನ ಗಡ್ಡದಲ್ಲಿ ಬೃಹತ್ ರಂಧ್ರ ಕೊರೆಯುವ ಪೂರ್ವದಲ್ಲಿ ವೈಜ್ಞಾನಿಕವಾಗಿ ಮುಂಬರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿಲ್ಲ. ಮಳೆಗಾಲದ ಪ್ರಾರಂಭದ ಅವಧಿಯಲ್ಲೇ ಅಲಿಗದ್ದಾದ ಗುಡ್ಡದಲ್ಲಿನ ಸುರಂಗ ಮಾರ್ಗದಲ್ಲಿ ಮಣ್ಣು ಕುಸಿತವಾಗುವ ಬಗ್ಗೆ ಪ್ರಾರಂಭದಲ್ಲೇ ಈ ಬಗ್ಗೆ ಅಧ್ಯಯನ ನಡೆಸಬೇಕಾಗಿತ್ತು. ಸದ್ಯ ಇದೇ ರೀತಿ ಮಣ್ಣು ಕುಸಿದರೆ ಮುಂದಿನ ದಿನದಲ್ಲಿ ಸುರಂಗ ಮಾರ್ಗದ ಕಾರ್ಯಕ್ಕೆ ಇನ್ನಷ್ಟು ತೊಂದರೆಯಾಗಲಿದೆ.
Leave a Comment