ಕಾರವಾರ: ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಜಕೀಯ ಪ್ರಮುಖರು ಸಕ್ರಿಯರಾಗಿದ್ದಾರೆ.
ರಾಜಕೀಯ ರಾಷ್ಟ್ರೀಯ ಮುಖಂಡರನ್ನು ಪ್ರೇರಣೆಯಾಗಿ ಪಡೆದುಕೊಂಡು 2018ರ ವಿಧಾನಸಭೆ ಚುನಾವಣೆಗಳ ಪೂರ್ವ ಸಿದ್ದತೆಗಳನ್ನು ನಡೆಸಿಕೊಳ್ಳಲು ಸ್ಥಳೀಯ ನಾಯಕರು ಸಿದ್ದತೆ ನಡೆಸುತ್ತಿದ್ದಾರೆ. ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಪೂರ್ಣ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಪಕ್ಷದ ವತಿಯಿಂದ ನಡೆಯುವ ಕಾರ್ಯ ಚಟುವಟಿಕೆ, ಸಭೆ, ಸಮಾರಂಭಗಳು ನಡೆದ ಸಂದರ್ಭದಲ್ಲಿ ಆಯಾ ಮುಖಂಡರು ತಮ್ಮನ್ನು ತಾವೇ ಪ್ರಶಂಸೆ ಮಾಡಿಕೊಂಡು ತಮ್ಮದೆ ಭಾವಚಿತ್ರ, ತಮ್ಮದೇ ಭಾಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಎಂಎಲ್ಎ, ಈ ಹಿಂದೆ ಸೋತ ಅಭ್ಯರ್ಥಿಗಳು ಹಾಗೂ ಹೊಸ ಆಶಾಭಾವಣೆಗಳನ್ನು ಹೊತ್ತ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಿದ್ದಾರೆ.
ಕೆಲ ಪಕ್ಷದ ಮುಖಂಡರು ತಮ್ಮಗೇ ಟಿಕೆಟ್ ಲಭಿಸಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದು ತಮ್ಮದೇ ಹೆಸರಿನಲ್ಲಿ ಪೇಸ್ಬುಕ್ಳಲ್ಲಿ ಹಲವಾರು ಐಡಿ ಹಾಗೂ ಪೇಸ್ಬುಕ್ಗಳಲ್ಲಿ ತಮ್ಮ ಪೇಜ್ ಮಾಡಿಕೊಂಡಿದ್ದಾರೆ. ಚುನಾವಣೆಗಳು ಹತ್ತಿವಾಗುತ್ತಿದ್ದಂತೆ ಆಯಾ ಮುಖಂಡರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದ್ದು ತಮ್ಮ ರಾಜಕೀಯ ಮುಖಂಡರನ್ನು ಖುಷಿ ಪಡಿಸಲು ವಾಟ್ಸ್ಆಪ್ ಗ್ರೂಪ್, ಪೇಸ್ಬುಕ್ ಪೆಜ್ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿ ಇದೊಂದು ಹೊಸ ಟ್ರೆಂಡ್ ಪ್ರಾರಂಗೊಂಡಿದೆ. ಹಾಲಿ ಮುಖಂಡರ ಜೊತೆಗೆ ಅವರಿಗೆ ಪೈಟೋಟಿ ನೀಡಲು ತಾವು ಯಾವುದರಲ್ಲೂ ಹಿಂದಿಲ್ಲ ಎನ್ನುವ ನಿಟ್ಟಿನಲ್ಲಿ ಹೊಸಬರು ಸ್ಪರ್ಧೆಗೆ ಇಳಿದಿದ್ದಾರೆ. ಅಲ್ಲದೆ ಜಿಲ್ಲೆಯ ಆಯಾ ಭಾಗದಲ್ಲಿ ಕೆಲವು ಪಕ್ಷ, ಸಂಘಟನೆಗಳಲ್ಲಿ ಗುರುತಿಸಿಕೊಂಡರುವ ಸಹ ತಮಗೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ರಾಜಕೀಯ ನಾಯಕರು ತಾಂತ್ರಿಕವಾಗಿ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೆಲವು ಯುವಕರನ್ನು ನೇಮಿಸಿಕೊಂಡಿದ್ದಾರೆ. ಯುವಕರ ಕೈಗೆ ಸ್ಮಾರ್ಟ್ ಫೋನುಗಳನ್ನು ನೀಡುವ ನಾಯಕರು, ಯುವಕರು ತಮ್ಮ ನಾಯಕರ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಕ್ಲಬ್ ಹೆಸರಿನಲ್ಲಿ ಅನೇಕ ಗುಂಪುಗಳನ್ನು ರಚಿಸಿದ್ದಾರೆ. ಈ ಯುವಕರಿಗೆ ಸಾಮಾಜಿಕ ಜಾಲತಾಣಗಳನ್ನು ತಮ್ಮ ನಾಯಕರ ರಾಜಕೀಯ ಚಟುವಟಿಕೆಗಳನ್ನು ಮಾಡಿದ ಭಾಷಣ, ಟೀಕೆಗಳನ್ನೇ ಪ್ರದರ್ಶಿಸಬೇಕು. ಪೇಸ್ಬುಕ್ಗಳ ಜೊತೆಗೆ ವಾಟ್ಸ್ಆಪ್ಗಳಲ್ಲು ಗುಂಪುಗಳನ್ನು ರಚಿಸಿ ಈ ಬಾರಿಯ ಟಿಕೆಟ್ ತಮ್ಮ ನಾಯಕರಿಗೇ ಎನ್ನುವ ರೀತಿಯ ಮಾಹಿತಿಗಳನ್ನು ಹರಿದು ಬಿಡಲಾಗುತ್ತಿದೆ. ಅಂಥ ಗುಂಪುಗಳಿಗೆ ಸಾಮಾನ್ಯ ಜನರಿಗೂ ಸೇರಿಸಲಾಗುತ್ತಿದ್ದು ರಾಜಕೀಯ ನಾಯಕರ ನಿರೀಕ್ಷೆಗೂ ಮೀರಿ ಬರುವ ಸಂದೇಶಗಳು, ಚಿತ್ರಗಳು ಜನರಿಗೆ ಕಿರಿಕಿರಿ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
Leave a Comment