ಕಾರವಾರ: ಕನ್ನಡ ಭವನದಲ್ಲಿ ನಡೆದ ಪಹರೆ ವೇದಿಕೆಯವರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ದಶಕಗಳಿಂದ ಚಾಪೇಲ್ ಯುದ್ದ ನೌಕೆ ಸಂಗ್ರಹಾಲಯಲ್ಲಿ ಮಾರ್ಗದರ್ಶಿಯಾಗಿರುವ ವಿಜಯ್ಗೆ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡಲ ಜೀವಶಾಸ್ತ್ರಜ್ಞ ಜಿ.ಎನ್ ರಾಥೋಡ್, ಸಮುದ್ರವನ್ನು ಸರಿಯಾಗಿ ಬಳಕೆ ಮಾಡಿಕೊಂಡರೇ ಪ್ರವಾಸೋಧ್ಯಮದ ಮೂಲಕ ಸಾಕಷ್ಟು ಉದ್ಯೋಗ ಕಲ್ಪಿಸಬಹುದು ಎಂದರು. ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಕೆ.ಟಿ ತಾಂಡೇಲ್, ಉದ್ಯಮಿ ಜಾರ್ಜ ಫರ್ನಾಂಡಿಸ್ ವೇದಿಕೆಯಲ್ಲಿದ್ದು ಮಾತನಾಡಿದರು. ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಚಿಂತನ ಮಂಥನ ವಿಭಾಗದ ಜಿ.ಡಿ ಮನೋಜ, ಅಜಯ ಸಾಹುಕಾರ್, ಬಾಬು ಮಾಳ್ಸೇಕರ್ ಇತರರಿದ್ದರು.
Leave a Comment