ಕಾರವಾರ:
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯೊಬ್ಬರು ಅಪರ ಜಿಲ್ಲಾಧಿಕಾರಿ ಬಳಿ ಹಗುರವಾಗಿ ಮಾತನಾಡಿದ್ದು, ಇದರಿಂದ ಅಧಿಕಾರಿಗಳು ಕೋಪಗೊಂಡರು.
ವಿಟಿಯೂ ವಿರುದ್ದ ಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿ ಹಾಗೂ ವಿದ್ಯಾರ್ಥಿಗಳ ನಡುವೆ ಕೆಲಕಾಲ ವಾಗ್ವಾದಗಳು ನಡೆದವು. ಪ್ರತಿಭಟನೆ ನಂತರ ವಿದ್ಯಾರ್ಥಿಗಳ ಮನವಿ ಆಲಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರ ಕುರಿತು ವಿದ್ಯಾರ್ಥಿನಿಯೊಬ್ಬರು ಹಗುರವಾಗಿ ಮಾತನಾಡಿದರು. “ಒಂದು ಗಂಟೆಯಿಂದ ಪ್ರತಿಭಟಿಸುತ್ತಿದ್ದರೂ ಈಗ ಮನವಿ ಸ್ವೀಕರಿಸಲು ಬಂದಿದ್ದಿರಲ್ಲ?” ಎಂದು ವಿದ್ಯಾರ್ಥಿನಿ ಪ್ರಶ್ನಿಸಿದಕ್ಕಾಗಿ ಅಪರ ಜಿಲ್ಲಾಧಿಕಾರಿಗಳು ಕೋಪಗೊಂಡರು. ಪರವಾನಿಗೆ ಇಲ್ಲದೇ ಪ್ರತಿಭಟಿಸಿರುವದಕ್ಕೆ ಅಪರ ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ಸಾಕಷ್ಟು ಒತ್ತಡದ ಮದ್ಯೆಯೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸದೇ ಕಚೇರಿಗೆ ತೆರಳಿದರು. ಇದರಿಂದ ವಿದ್ಯಾರ್ಥಿಗಳು ಇನ್ನಷ್ಟು ಸಿಟ್ಟಾದರು. ನಂತರ ಆಗಮಿಸಿದ ಉಪ ವಿಭಾಗಾಧಿಕಾರಿ ಶವಾನಂದ ಕರಾಳೆ ಮನವಿ ಸ್ವೀಕರಿಸಿದರು. ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ವಿರುದ್ದ ಕ್ರಮ ಜರುಗಿಸುವಂತೆ ಎಬಿವಿಪಿಯವರು ಮನವಿ ಮೂಲಕ ರಾಝ್ಯಪಾಲರನ್ನು ಒತ್ತಾಯಿಸಿದ್ದರು. ಪ್ರಮುಖರಾದ ಸುದ್ದು ಮದರಗುಂಡಿ, ಜಾನು ಪ್ರಸಾದ ಕುಡ್ತಳಕರ್ ಇತರರಿದ್ದರು.
Leave a Comment