ಕಾರವಾರ :ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಸುಳ್ಳು ಆರೋಪದ ಅಡಿಯಲ್ಲಿ ಕಾರವಾರ ಸಿಪಿಐ ದೌರ್ಜನ್ಯ ಎಸಗಿರುವ ಬಗ್ಗೆ ವಾಟಾಳ್ ಪಕ್ಷ ಜಿಲ್ಲಾಧ್ಯಕ್ಷ ರಾಘು ನಾಯ್ಕ ಆರೋಪಿಸಿದರು.
ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಅ. 13ರಂದು ನಗರದ ಮಾಲಾದೇವಿ ಮೈದಾನದ ಬಳಿ ಬೈಕ್ ಕಟ್ಟು ನಿಂತಿದ್ದ ಸಂದರ್ಭದಲ್ಲಿ ನಗರಸಭೆ ಸದಸ್ಯ ತನ್ನ ಬಳಿ ಬಂದು ಕ್ಷುಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾರೆ. ಆದರೆ ತಾವು ಅವರ ಮೇಲೆ ಹಲ್ಲೆ ನಡೆಸಿಲ್ಲ. ತಮ್ಮಷ್ಟಕ್ಕೆ ನೆಲಕ್ಕೂರುಳಿ ಬಿದ್ದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು. ಕಾರವಾರ ಪೊಲೀಸರು ತಮ್ಮನ್ನು ಬಂಧಿಸಿದ್ದು, ಬಳಿಕ ಲಾಕಪ್ನಲ್ಲಿ ಹಾಕಿದ ಬಳಿಕ ತನ್ನ ಫೋಟೊವನ್ನು ಪೊಲೀಸ್ ಸಿಬ್ಬಂದಿ ಅಕ್ರಮವಾಗಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿ ಮಾನ ಹರಾಜು ಮಾಡಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಇಲ್ಲಿನ ಲೋಕೋಪಯೋಗಿ ಇಲಾಖೆಯ ನೌಕರನ ಕುಮ್ಮಕ್ಕಿದೆ ಎಂದು ದೂರಿದರು.
2014ರಲ್ಲಿ ಸರಕಾರಿ ನೌಕರ ಹಾಗೂ ನನ್ನ ನಡುವೆ ನಡೆದ ಚಿಕ್ಕ ಗಲಾಟೆಯೇ ಕಾರಣವಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣದ ನಡೆಯುತ್ತಿದ್ದು ಆತನ ವಿರುದ್ಧ ಆದೇಶ ಬರಬಹುದು ಎಂದು ಆತಂಕಗೊಂಡು ತನ್ನ ವಿರುದ್ಧ ಸೇಡು ತಿರಿಸಿಕೊಳ್ಳಲು ಕಳೆದ 2014ರಿಂದ ಹೊಂಚು ಹಾಕಿಕೊಂಡು, ಸಿಪಿಐ ಜೊತೆ ಸೇರಿ ಈಗ ನಗರಸಭೆ ಸದಸ್ಯನನ್ನು ಬಳಿಸಿಕೊಂಡು ತನ್ನ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ ಎಂದು ದೂರಿದರು.
Leave a Comment