ಕಾರವಾರ: ಮಕ್ಕಳ ಪಕ್ಷದ ಮುಖಂಡ ರಾಘು ನಾಯ್ಕ ತಮ್ಮ ಮೇಲೆ ಹಲ್ಲೆ ನಡೆಸಿದಲ್ಲದೇ ತಮ್ಮ ಹೆಸರು ಕೆಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ನಗರಸಭೆ ಸದಸ್ಯ ರತ್ನಾಕರ್ ನಾಯ್ಕ ಆರೋಪಿಸಿದರು.
ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ತಮ್ಮ ಮೇಲೆ ಹಲ್ಲೆ ನಡೆಸಿರುವದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಈ ಬಗ್ಗೆ ದೂರು ದಾಖಲಾದ ನಂತರ ಪೊಲೀಸ್ ಅಧಿಕಾರಿಗಳು ರಾಘು ನಾಯ್ಕರ ಮೇಲೆ ಪ್ರಕರಣದ ದಾಖಲಿಸಿ ಬಂಧಿಸಿದ್ದರು. ಬಳಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸುಮಾರು 18 ದಿನ ಕಾರಾಗೃಹ ವಾಸಕ್ಕೆ ಸೂಚಿಸಿತ್ತು. ನಂತರ ಜಾಮೀನು ಪಡೆದುಕೊಂಡು ಬಂಧನದಿಂದ ಹೊರಬರುತ್ತಿದ್ದಂತೆ ರಾಘು ನಾಯ್ಕ ಹಾಗೂ ಸಹಚರರು ತಮ್ಮಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಈ ಹಿಂದೆ ಶ್ರೀ ಮಾಲಾದೇವಿ ಮೈದಾನದಲ್ಲಿ ತನ್ನ ಮದುವೆಗೆ ಮಂಟಪ ನಿರ್ಮಾಣ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ರಾಘು ನಾಯ್ಕ ಅರ್ಜಿ ಸಲ್ಲಿಸಿದ್ದಾಗ ಜಿಲ್ಲಾಡಳಿತ ನಿರಾಕರಿಸಿತ್ತು. ಆಗ ಈ ವಿಷಯಕ್ಕೆ ನಾನೇ ಕಾರಣ ಎಂದು ತಿಳಿಸಿದು ನನ್ನ ವಿರುದ್ಧ ಜಗಳಕ್ಕೆ ಮುಂದಾಗಿದ್ದು, ಬಳಿಕ ನನ್ನ ವಿರುದ್ಧ ವಾರ್ಡಿನ ಅಭಿವೃದ್ಧಿ ಸರಿಯಾಗಿಲ್ಲ ಎಂದು ನಗರಸಭೆಗೆ ದೂರು ಸಲ್ಲಿಸಿದಲ್ಲದೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆ.13ರಂದು ತನ್ನ ಮೇಲೆ ಮಾರಣಾಂತಿಕವಾಗಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಇದರಿಂದಾಗಿ ತಾನು ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ನೋಡಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ತಾನು ಚೇತರಿಸಿಕೊಂಡು ಮನೆಗೆ ತೆರಳಿದ್ದಾಗ ತನ್ನ ಹೆಂಡತಿ ನನ್ನನ್ನು ನೋಡಿ ಗಾಬರಿಗೊಂಡು ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಸಲಹೆ ನೀಡಿದ ಬಳಿಕ ದೂರು ಸಲ್ಲಿಸಿದ್ದೇನೆ. ಅದರಂತೆ ಪೊಲೀಸರು ರಾಘು ವಿರುದ್ಧ ಕ್ರಮಕೈಗೊಂಡಿದ್ದಾರೆ. ಸದ್ಯ ತಾನು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯದಲ್ಲಿ ಪ್ರಕರಣವಿರುವಾಗ ಬಂಧನದಿಂದ ಹೊರಗಿರುವ ರಾಘು ಪ್ರಕರಣದ ಸಾಕ್ಷಿ ನಾಶ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಮುಖಂಡ ಎಂದು ಹೇಳಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲು ಕ್ರೀಡಾ ನಿಧಿಯಿಂದ 25 ಸಾವಿರ ರೂ. ಪಡೆದು ಪಂದ್ಯಾವಳಿ ಆಯೋಜಿಸದೆ ಹಣವನ್ನು ವಯಕ್ತಿಕ ಉಪಯೋಗಕ್ಕೆ ಬಳಿಸಿಕೊಂಡಿದ್ದ. ನಂತರ ನಗರಸಭೆಗೆ ಹಣ ಭರಣ ಮಾಡಲು ಹೇಳಿದ್ದರೂ ಇನ್ನು ಹಣ ವಾಪಸ್ ಭರಣ ಮಾಡಿಲ್ಲ ಎಂದು ನಗರಸಭೆ ಸದಸ್ಯ ರತ್ನಾಕರ ನಾಯ್ಕ ಆರೋಪಿಸಿದರು. ಈ ಹಿಂದೆ ಜಿಲ್ಲಾಧಿಕಾರಿ ಸಾರಿಗೆ ಇಲಾಖೆಯಲ್ಲಿ ಕಾನೂನು ಬಾಹೀರ ಚಾಲನಾ ತರಬೇತಿ ನಡೆಸುತ್ತಿರುವುದನ್ನು ರದ್ದು ಮಾಡಿದ್ದರು. ಆದರೂ ರಾಘು ನಾಯ್ಕ ಚಾಲನಾ ತರಬೇತಿಯನ್ನು ಮುಂದುವರಿಸಿದ್ದಾರೆ ಎಂದರು. ಸಾರಿಗೆ ಇಲಾಖೆಯಲ್ಲಿ ಹೊರ ರಾಜ್ಯದ ವ್ಯಕ್ತಿಗಳಿಗೆ ಯಾವುದೇ ದಾಖಲೆ ಇಲ್ಲದೆ ಅವರನ್ನು ತನ್ನ ಓಂ ಡ್ರೈವಿಂಗ್ ಶಾಲೆಯ ಹೆಸರಿನಲ್ಲಿ ವಿಳಾಸ ನೀಡಿ ಅವರಿಗೆ ದ್ವಿ ಚಕ್ರ ವಾಹನದ ಚಾಲನ ಪತ್ರ ದೊರಕಿಸಲು ಸಹಕರಿಸಿದ್ದಾನೆ ಎಂದು ಅರೋಪಿಸಿರುವ ರತ್ನಾಕರ್ ನಾಯ್ಕ, ಸುಮಾರು 160ಕ್ಕೂ ಹೆಚ್ಚಿನ ಜನರಿಗೆ ಹಣದ ಆಸೆಗೆ ಚಾಲನಾ ಪತ್ರ ಮಾಡಿಸಿಕೊಟ್ಟಿದ್ದಾನೆ. ಇದರ ಬಗ್ಗೆ ತನಿಖೆಯಾಗಬೇಕು. ಈ ಎಲ್ಲ ಪ್ರಕರಣದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಅಥವಾ ಸಿಓಡಿ, ಸಿಬಿಐ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು. ಛತ್ರಪತಿ ಮಾಳ್ಸೇಕರ್, ಸತೀಶ್ ಮೇತ್ರಿ, ಶ್ಯಾಮ ನಾಯ್ಕ, ಗುರುದಾಸ ನಾಯ್ಕ ಇದ್ದರು.
Leave a Comment