ಪ್ರಶ್ನೆ: ಸರ್ಕಾರ ಜನಸಂಖ್ಯೆ ಆಧಾರಿತವಾಗಿ ಜಿಲ್ಲೆಗಳಿಗೆ ಅನುಧಾನ ಬಿಡುಗಡೆ ಮಾಡುತ್ತದೆ. ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಸಾಕಷ್ಟು ವಿಸ್ತಾರವಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಜನಸಂಖ್ಯೆ ವಿರಳವಾಗಿರುವದರಿಂದ ಅನುಧಾನವೂ ಕಡಿಮೆ ಬರುತ್ತದೆ. ಇದರಿಂದ ನಿರಿಕ್ಷಿತ ಮಟ್ಟದಲ್ಲಿ ಜಿಲ್ಲೆ ಅಭಿವೃದ್ದಿಯಾಗಿಲ್ಲ. ಜಿಲ್ಲೆಯ ಜನ ಸೀಬರ್ಡ, ಕೈಗಾ, ಕೊಡಸಳ್ಳಿ ಮೊದಲಾದ ಯೋಜನೆಗಳಿಂದ ನಿರಾಶ್ರಿತರಾಗಿರುವದನ್ನು ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಅನುಧಾನ ಬಿಡುಗಡೆ ಮಾಡುವ ಪದ್ದತಿಯನ್ನು ಸಡಿಲಗೊಳಿಸಬೇಕು. ಇದರ ಜೊತೆ ಜಿಲ್ಲೆಗೆ ವಿಶೇಷ ಪ್ಯಾಕೆಜ್ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ.
ಮುಖ್ಯಮಂತ್ರಿಗಳ ಉತ್ತರ: ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ನೌಕಾನೆಲೆಯಿದೆ. ನಿರಾಶ್ರಿತರು ಇದ್ದಾರೆ. ಜನಸಂಖ್ಯೆ ಆದಾರಿತವಾಗಿ ಅನುಧಾನ ಬಿಡುಗಡೆ ಮಾಡುವದರಿಂದ ಗುಡ್ಡಗಾಡು ಪ್ರದೇಶದ ಜನರಿಗೆ ತೊಂದರೆಯಾಗುವದು ಸತ್ಯ. ಈ ಕುರಿತು ತಾವು ನೀಡಿದ ಸಲಹೆಯೂ ಸರಿಯಾಗಿದೆ. ಮುಂದಿನ ಬಜೇಟ್ ನಲ್ಲಿ ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ.
Leave a Comment