ಕಾರವಾರ: ಎರಡನೇ ಅಂತಸ್ತಿನ ಕಿಟಕಿಯಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ತೋಡೂರಿನ ಸೀಬರ್ಡ ಕಾಲೋನಿಯಲ್ಲಿ ನಡೆದಿದೆ.
ಅನೂಪಕುಮಾರ (45)ಮೃತರು. ಗುತ್ತಿಗೆದಾರರಾಗಿದ್ದ ಇವರು ಮೂಲತ ಗೋವಾ ರಾಜ್ಯದವರು. ತೋಡೂರಿನಲ್ಲಿ ವಾಸವಾಗಿದ್ದರು. ತಮ್ಮ ಮನೆಯ ಎರಡನೇ ಅಂತಸ್ತಿನ ಕಿಡಕಿಯಿಂದ ಇಣಕಿ ನೋಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಿಟಕಿಗೆ ಸರಳು ಹಾಗೂ ಗ್ಲಾಸ್ಗಳಿದ್ದವು. ಅವುಗಳ ಮೇಲೆ ಬಿದ್ದು ಸಾವನಪ್ಪಿದ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment