ಹಳಿಯಾಳ :
ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ತಮ್ಮ ವಸತಿ ಗೃಹದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬಳಿಕ ಅದನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿರುವ ದಲಿತ ಸಂಘಟನೆಯವರು ಘಟನೆಗೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ ಮೂವರ ಮೇಲೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ವಿದ್ಯಮಾನ ಹಳಿಯಾಳದಲ್ಲಿ ಮಧ್ಯರಾತ್ರಿ ನಡೆದಿದೆ.
ಘಟನೆ ಹಿನ್ನೆಲೆ :- ದಿ.4 ರಂದು ಹಳಿಯಾಳ ಸರ್ಕಾರಿ ಆಸ್ಪತ್ರೆಯ ಹಿಂದುಗಡೆಯ ವೈದ್ಯರ ವಸತಿ ಗೃಹದಿಂದ ಸರ್ಕಾರಿ ಆಸ್ಪತ್ರೆಗೆ ಸೇರಿದ ಕಾಟ್ಗಳು, ಕುರ್ಚಿಗಳು, ಆಕ್ಸಿಜನ್, ಕಪ ತೆಗೆಯುವ ಯಂತ್ರ, ಯಂಗಲ್ಗಳು ಸೇರಿದಂತೆ ಹಲವಾರು ವಸ್ತುಗಳನ್ನು ತುಂಬಿಕೊಂಡು ವಾಹನ ಸಂಖ್ಯೆ ಕೆಎ 26 /5055ರಲ್ಲಿ ತೆಗೆದುಕೊಂಡು ಹೊಗುತ್ತಿರುವ ಮಾಹಿತಿ ಅರಿತ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ (ಚಂದ್ರಕಾಂತ ಕಾದ್ರೋಳ್ಳಿ) ಬಣದ ಜಿಲ್ಲಾಧ್ಯಕ್ಷ ಈರಣ್ಣಾ ವಡ್ಡರ ತಮ್ಮ ಇತರ ಮುಖಂಡರೊಂದಿಗೆ ವಾಹನವನ್ನು ಹಿಂಬಾಲಿಸಿ ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್ಪೊಸ್ಟ್ ಬಳಿ ವಾಹನವನ್ನು ತಡೆದು ಪರಿಶೀಲಿಸಿದಾಗ ವಿಷಯ ಢೃಡಪಟ್ಟಿದ್ದು ಕೂಡಲೇ ಅವರು ವಾಹವನ್ನು ಹಳಿಯಾಳ ಪೋಲಿಸ್ ಠಾಣೆಗೆ ತಂದು ಒಪ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಈ ಹಿಂದೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ಧಾರವಾಡಕ್ಕೆ ವರ್ಗವಾಗಿರುವ ಸರ್ಜನ್ ಸಮೀರ ಶಾನು ಅವರು ಇದನ್ನೇಲ್ಲಾ ಕೇಳಲು ನಿವ್ಯಾರು ಎಂದು ಏರು ಧ್ವನಿಯಲ್ಲಿ ಮಾತನಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಕೂಡ ಮಾಡಿದ್ದಾರೆಂದು ಈರಣ್ಣಾ ವಡ್ಡರ ಅವರು ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದು ಡಾ.ಸಮೀರ ಶಾನು, ಅವರ ತಂದೆ ಹಾಗೂ ವಾಹನ ಚಾಲಕ ಮಲ್ಲಪ್ಪ ಮಹಾದೇವಪ್ಪ ಜಗಳೂರ ಅವರ ಮೇಲೆ ಭಾರತೀಯ ದಂಡ ಸಂಹಿತೆ 3(1)(ಆರ್)ಎಸ್ಸಿಎಸ್ಟಿ(ಪಿಒಎ)ಅಮೆಂಡಮೆಂಟ್ ಕಲಂ 2015 ಮತ್ತು 406,409 ಆರ್/ಡಬ್ಲೂ 34ಐಪಿಸಿ ಅನ್ವಯ ಪ್ರಕರಣ ದಾಖಲಾಗಿದ್ದು ಆರೋಪಿತರು ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ದಿ.7 ಕ್ಕೆ ಧರಣಿ :- ಘಟನಾ ಸ್ಥಳದಿಂದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವವರೆಗೂ ಪಟ್ಟು ಬಿಡದೆ ಈಡಿ ರಾತ್ರಿ ಜಾಗರಣೆ ಮಾಡಿದ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ (ಚಂದ್ರಕಾಂತ ಕಾದ್ರೋಳ್ಳಿ) ಬಣದ ಮುಖಂಡರು ಕಾರ್ಯಕರ್ತರು ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದ್ದು ಸರ್ಕಾರದ ಸ್ವತ್ತನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ದಿ.7 ರಂದು ಹಳಿಯಾಳದ ಪೋಲಿಸ್, ತಹಶೀಲ್ದಾರ್ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ (ಚಂದ್ರಕಾಂತ ಕಾದ್ರೋಳ್ಳಿ) ಬಣದ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment