ಕಾರವಾರ: ಇಲ್ಲಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷದಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಜಿಲ್ಲಾಸ್ಪತ್ರೆಯಲ್ಲಿ ರೋಗಗಳನ್ನು ಮಲಗಿಸುವ ಹಾಸಿಗಗಳ ಮೇಲೆ ಬೆಕ್ಕುಗಳು ಮಲಗಿರುವ ಚಿತ್ರ ವೈರಲ್ ಆಗಿದೆ.
ನಗರದ ಹಬ್ಬುವಾಡ ನಿವಾಸಿ ಸತ್ಯಾನಂದ ಪ್ರಭು ಎಂಬಾತರು ಈಚೆಗೆ ಮಗನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಪರಿಣಾಮ ಅವರು ಹಾಗೂ ಪುತ್ರ ಗಾಯಗೊಂಡಿದ್ದರು. ಹೀಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು. ಸತ್ಯಾನಂದ ಪ್ರಭು ರವರ ಪುತ್ರ ದಾಖಲಾದ ಕೊಠಡಿಯಲ್ಲಿನ ಮಂಚದಲ್ಲಿ ಬೆಕ್ಕುಗಳು ಆಶ್ರಯ ಪಡೆದಿದ್ದವು. ಇತರೆ ಎಲ್ಲ ಹಾಸಿಗೆಗಳಲ್ಲಿ ರೋಗಿಗಳಿರುವದರಿಂದ ತಮ್ಮ ಮಗನನ್ನು ಮಲಗಿಸಲು ಸ್ಥಳಾವಕಾಶ ಸಿಕ್ಕಿರಲಿಲ್ಲ. ಬೆಕ್ಕುಗಳನ್ನು ಓಡಿಸಿ ಹಾಸಿಗೆಯನ್ನು ಸ್ವಚ್ಚಗೊಳಿಸುವಂತೆ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ತಮ್ಮ ಮಾತು ಆಲಿಸಲಿಲ್ಲ ಎಂದು ಸತ್ಯಾನಂದ ಪ್ರಭು ದೂರಿದ್ದಾರೆ. ಇದಾದ ನಂತರ ವೈದ್ಯರೊಬ್ಬರು ಚಿಕಿತ್ಸೆ ನೀಡಲು ಆಗಮಿಸಿದ್ದು, ಕಾಲು ಉಳುಕಿದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಸೂಚಿಸಿದರು. ಆಸ್ಪತ್ರೆಯಿಂದ ಬಾಲಕನನ್ನು ಮನೆಗೆ ಕರೆದೊಯ್ಯಲು ಕೊಡಲಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೊಡಲಿಲ್ಲ. ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಒಪ್ಪದೇ ಪಟ್ಟು ಹಿಡಿದು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದಾಗ ಒಂದೇ ದಿನದಲ್ಲಿ ಕಾಲು ಉಳುಕಿರುವದನ್ನು ಸರಿ ಮಾಡಲಾಯಿತು ಎಂದು ವಿವರಿಸಿದರು.
ಜಿಲ್ಲಾಸ್ಪತ್ರೆ ವೈದ್ಯರು ರೋಗಿಗಳ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ ಎಂದು ದೂರಿರುವ ಅವರು, ರೋಗಿಗಳ ಕುರಿತು ನಿರ್ಲಕ್ಷ ಹೊಂದಿರುವ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಅದನ್ನು ಮಾಡಿಸುವಂತೆ ರೋಗಿಗಳಿಗೆ ಒತ್ತಡ ಹಾಕುವದು ಹಾಗೂ ವಿದ್ಯಾರ್ಥಿಗಳ ಪ್ರಯೋಗಕ್ಕಾಗಿ ಮಕ್ಕಳನ್ನು ಉಪಯೋಗಿಸಿಕೊಳ್ಳವದು ಆತಂಕಕಾರಿ ಎಂದು ಅಭಿಪ್ರಾಯ ಪಟ್ಟರು. ಇದಲ್ಲದೇ ಜಿಲ್ಲಾಸ್ಪತ್ರೆಯಲ್ಲಿನ ಹಾಸಿಗೆಗಳ ಮೇಲೆ ಬೆಕ್ಕುಗಳು ಮಲಗಿರುವ ಚಿತ್ರವನ್ನು ಸಾಮಾಜಿಕ ತಾಣಗಳಿಗೆ ಹರಿಬಿಟ್ಟಿದ್ದಾರೆ
Leave a Comment