ಕಾರವಾರ:
ಕನ್ನಡ ರಾಜ್ಯೋತ್ಸವ ನಿಮಿತ್ತ ಕೈಗಾದಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಮತ್ತು ಕವಿಗೋಷ್ಠಿಯನ್ನು ಆಯೋಜಿಸಲಾಗುತ್ತಿದೆ.
20 ಸಾಲುಗಳಿಗೆ ಮೀರದಂತೆ ಕವನವನ್ನು ಸ್ಪರ್ಧೆಗೆ ಕಳುಹಿಸಲು ಕೋರಲಾಗಿದೆ. ಒಬ್ಬರು ಒಂದು ಕವನ ಮಾತ್ರ ಕಳುಹಿಸಬೇಕು. ಹೊಸ ತರಹದ, ತರ್ಕಬದ್ಧ ಬರಹಗಳಿಗೆ ಮನ್ನಣೆ. ಬಹುಮಾನಿತ ಮತ್ತು ಆಯ್ಕೆಯಾದ ಕವಿಗಳಿಗೆ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಸನ್ಮಾನ ಮತ್ತು ಭಾಗವಹಿಸಲು ಅವಕಾಶ ನೀಡಲಾಗುವುದು. ನಾಡಿನ ಪ್ರಮುಖ ಸಾಹಿತಿಗಳು ಇದಕ್ಕೆ ತೀರ್ಪುಗಾರರಾಗಲಿದ್ದಾರೆ. ಕವನ ಕಳುಹಿಸಲು ಕಡೆಯ ದಿನಾಂಕ 30 ಸೆಪ್ಟಂಬರ್ 2017. ಕೇವಲ ಈ ಅಂಚೆ ಮುಖಾಂತರ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂತೋಷಕುಮಾರ್ ಮೆಹೆಂದಳೆ, ಸಂಚಾಲಕರು. ರಾಜ್ಯಮಟ್ಟದ ಕವನ ಸ್ಪರ್ಧೆ, ಸ.ಕ.ಸಂ. ಕೈಗಾ,[email protected] , [email protected] , ಮೋ: 7019353483ನ್ನು ಸಂಪರ್ಕಿಸಬಹುದಾಗಿದೆ.
Leave a Comment