• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ;ಉಪನ್ಯಾಸಕ ಶಿವಪ್ಪ

September 13, 2017 by Sachin Hegde Leave a Comment

ಹೊನ್ನಾವರ ; ಶಿಕ್ಷಕ ಅಪಚಾರ ಮಾಡಿದರೆ ಇಡೀ ಸಮಾಜವೇ ಕೆಡಬಹುದು ಆದರೆ ಅದೇ ಶಿಕ್ಷಕ ಬದಲಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು ಹಾಗಾಗಿ ಶಿಕ್ಷಕ ರೋಲ್ ಮಾಡೆಲ್ ಆಗಿರಬೇಕು ಎಂದು ಅರೇಅಂಗಡಿಯ SಏP ಪದವಿಪೂರ್ವ ಮಹಾವಿದ್ಯಾಲಯದ, ಇತಿಹಾಸ ಉಪನ್ಯಾಸಕರಾದ ಶಿವಪ್ಪ, ಹೇಳಿದರು.
ಅವರು ಹಿರಿಯ ಪ್ರಾಥಮಿಕ ಶಾಲೆ, ಕೆರೆಕೋಣನಲ್ಲಿ Sಆಒಅ ಮತ್ತು ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ಕೆರೆಕೋಣ ಇವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ವಿದ್ಯಾರ್ಥಿಗಳಲ್ಲಿ ಇರುವ ಕೌಶಲ್ಯವನ್ನು ಗರುತಿಸಿ, ಅವರಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಿಕ್ಷಣ ಸಂಯೋಜಕ ಆರ್.ಪಿ. ಹರಿಜನ ಮಾತನಾಡಿ ಮಕ್ಕಳು ಹಸಿ ಮಣ್ಣು ಮುದ್ದೆ ಹಾಗೆ ಇರುತ್ತಾರೆ, ಆ ಮಣ್ಣು ಮುದ್ದೆಗೆ ಒಬ್ಬ ಕಲಾಕಾರ ಆಕಾರ ಕೊಟ್ಟ ಹಾಗೆ ಶಿಕ್ಷಕ ಕೂಡ ಆ ಮಕ್ಕಳಿಗೆ ಆಕಾರ ಕೊಡುತ್ತಾನೆ. ಹಾಗಾಗಿ ಶಿಕ್ಷಕನ ಜವಾಬ್ದಾರಿ ಅತ್ಯಂತ ಮಹತ್ವ ಪೂರ್ಣವಾದದ್ದೂ, ಶ್ರೇಷ್ಟವಾದದ್ದೂ ಆಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಬಗ್ಗೆ ಮಾತನಾಡುತ್ತಾ ಖಾಸಗಿ ಶಾಲೆ ಮಕ್ಕಳು ಅಶೋಕ ಮರವಿದ್ದಂತೆ, ಅವರಿಗೆ ಪರ್ಸಂಟೇಜ್ ಬಗ್ಗೆ ಮಾತ್ರ ಗಮನ ಜಾಸ್ತಿ ಇರುತ್ತದೆ ನೇರವಾಗಿ ಬೆಳೆಯುತ್ತಾರೆ ಆದರೆ ಸರ್ಕಾರಿ ಶಾಲೆ ಮಕ್ಕಳು ಆಲದ ಮರದಂತೆ ಆಡುತ್ತಾ, ನಲಿಯುತ್ತಾ, ಜಿಗಿದಾಡುತ್ತಾ, ಸ್ವತಂತ್ರವಾಗಿ ಕಲಿಯುತ್ತಾರೆ. ಅವರನ್ನು ಭೂಮಿ ಮೇಲೆ ಎಲ್ಲೇ ಬಿಟ್ಟರೂ ಬದುಕಬಲ್ಲರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆರೆಕೋಣ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್.ಎಸ್.ಭಟ್, ಸಹ ಶಿಕ್ಷಕರಾದ ವಿನಾಯಕ ಭಟ್, ಲಲಿತಾ ಹೆಗಡೆ, ಸಂದೀಪ್ ಭಟ್, ಗಾಯತ್ರಿ ನಾಯ್ಕ, ಅರೇಂಗಡಿ ಎಸ್‍ಕೆಪಿ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕರಾದ ಶಿವಪ್ಪ, ಶಿಕ್ಷಣ ಸಂಯೋಜಕ ಆರ್.ಪಿ.ಹರಿಜನ, ಕೆರೆಕೋಣ ಅಂಗನವಾಡಿ ಶಿಕ್ಷಕಿ ಶೈಲಾ ಗಣಪತಿ ಹೆಗಡೆ ಮತ್ತು ಹಿರಿಯ ನಿವೃತ್ತ ಶಿಕ್ಷಕ ಬಿ.ವಿ.ಭಂಡಾರಿಯವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯ್ತು.
ಸನ್ಮಾನ ಸ್ವೀಕರಿಸಿ ಮುಖ್ಯಾಧ್ಯಾಪಕ ಆರ್ ಎಸ್ ಭಟ್ಟ, ಮಾತನಾಡಿ ಶಿಕ್ಷಕರಿಗೆ ನಿವೃತ್ತರಾದ ಮೇಲೆ ಸನ್ಮಾನಿಸುವುದನ್ನು ನೋಡಿದ್ದೆ, ಆದರೆ ಇಲ್ಲಿಯ ಹಳೆ ವಿದ್ಯಾರ್ಥಿಗಳ ಸಂಘ, ನಾವು ಸೇವೆಯಲ್ಲಿರುವಾಗಲೇ ಸನ್ಮಾನಿಸಿ ಹೊಸ ಅಧ್ಯಾಯ ಬರೆದಿದ್ದಾರೆ ಮತ್ತು ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ, ನಿಜಕ್ಕೂ ಇದು ನನಗೆ ಮರೆಯಲಾಗದ ಅನುಭವ. ನನ್ನ 38 ವರ್ಷದ ಸರ್ವಿಸ್ನಲ್ಲಿ ಶಾಲು ಹೊದೆಸಿ ಸನ್ಮಾನಿಸಿಕೊಂಡಿದ್ದು ಇದೇ ಮೊದಲು. ಇವರ ಪ್ರೀತಿಗೆ ನಾನು ಋಣಿ ಎಂದು ಹೇಳುತ್ತಾ ಶಿಕ್ಷಕರ ಜವಾಬ್ದಾರಿಯನ್ನು ಪ್ರೀತಿ ಮೂಲಕ ಹೆಚ್ಚಿಸಿದ್ದಾರೆ ಎಂದರು.
ಈ ಮಧ್ಯೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶರವರ ಹತ್ಯೆಂiÀiನ್ನು ಬಲವಾಗಿ ಖಂಡಿಸಿ ಒಂದು ನಿಮಿಷದ ಮೌನಾಚರಣೆ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯ್ತು.
ವೇದಿಕೆಯ ಮೇಲೆ ಗ್ರಾಮ ಪಂಚಾಯತ ಸದಸ್ಯೆ ಅಶ್ವಿನಿ ಮೊಗೇರ ಉಪಸ್ಥಿತರಿದ್ದರು. ಕೇಶವ ಶೆಟ್ಟಿ ಮಾತನಾಡಿದರು
ಎಸ್‍ಡಿಎಮ್‍ಸಿ ಅಧ್ಯಕ್ಷ ಎಮ್.ಎಸ್.ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮ ಭಂಡಾರಿ ಸ್ವಾಗತಿಸಿದರು, ಮಂಜುನಾಥ ಅಣ್ಣಪ್ಪ ಶೆಟ್ಟಿ ವಂದಿಸಿದರು. ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಅಪಚಾರ ಮಾಡಿದರೆ ಇಡೀ ಸಮಾಜವೇ ಕೆಡಬಹುದು, ಅರೇಂಗಡಿ, ಆರ್.ಎಸ್.ಭಟ್, ಉಪನ್ಯಾಸಕ ಶಿವಪ್ಪ, ಕೆರೆಕೋಣ ಅಂಗನವಾಡಿ ಶಿಕ್ಷಕಿ ಶೈಲಾ ಗಣಪತಿ ಹೆಗಡೆ, ಕೆರೆಕೋಣ ಇವರು ಶಿಕ್ಷಕರ, ಗಾಯತ್ರಿ ನಾಯ್ಕ, ಲಲಿತಾ ಹೆಗಡೆ, ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ, ಶಿಕ್ಷಕ, ಸಂದೀಪ್ ಭಟ್, ಸಹ ಶಿಕ್ಷಕರಾದ ವಿನಾಯಕ ಭಟ್, ಹಳೆ ವಿದ್ಯಾರ್ಥಿಗಳ ಸಂಘ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar