ಕಾರವಾರ:
ಕರ್ಣಾಟಕ ಶಿಲ್ಪಕಲಾ ಅಕಾಡೆಮಿಯು ಸಾಂಪ್ರದಾಯಿಕ ಮತ್ತು ಸಮಕಾಲೀನ ಶಿಲ್ಪಕಲೆಯ ಹದಿಮೂರನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ ಹುಟ್ಟಿದ ಅಥವಾ ಶಿಲ್ಪಕಲಾ ಪ್ರದರ್ಶನಕ್ಕೆ 5 ವರ್ಷ ಮೊದಲು ರಾಜ್ಯದಲ್ಲಿ ನೆಲೆಸಿರುವ 18 ರಿಂದ 45 ವರ್ಷದೊಳಗಿನ ಶಿಲ್ಪಿಗಳು ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಪ್ರದರ್ಶನಕ್ಕೆ ಕಳುಹಿಸುವ ಶಿಲ್ಪಗಳು ಎರಡು ಅಡಿಗಳ ಪ್ರಮಾಣದ ಲೋಹ, ಮರ .ಕಲ್ಲು, ಮಿಶ್ರಮಾದ್ಯಮದಲ್ಲಿ ಇರಬೇಕು. ಅತ್ಯುತ್ತಮ ಕಲಾಕೃತಿಗಳಿಗೆ ರೂ. 25 ಸಾವಿರ ಬಹುಮಾನ ನೀಡಲಾಗುವುದು. ಶಿಲ್ಪ ಕೃತಿಗಳನ್ನು ಅಕ್ಟೋಬರ್ 10 ರೊಳಗಾಗಿ ಅಕಾಡೆಮಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ತಲುಪಿಸಬೇಕು. ಪ್ರವೇಶ ಪಡೆಯಲಿಚ್ಛಿಸುವವರು ವಿವರಣಾ ಪತ್ರವನ್ನು www.karnatakashilpakalaacademy.org ನಲ್ಲಿ. ಅಥವಾ ರಾಜ್ಯದ ಎಲ್ಲಾ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1 ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ( ದೂ. ಸಂ: 080-22278725) ಇವರನ್ನು ಸಂಪರ್ಕಿಸಬಹುದಾಗಿದೆ.
Leave a Comment