ಕಾರವಾರ: ನಗರದಲ್ಲಿ ಅನಧಿಕೃತಾಗಿ ನಿರ್ಮಿಸಿಕೊಂಡಿದ್ದ ವಾಣಿಜ್ಯ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಗುರುವಾರ ಬೆಳಗ್ಗೆ ನೆಲಸಮಗೊಳಿಸಿದರು.
ಪಿಕಳೆ ರಸ್ತೆ ಹಾಗೂ ಗ್ರೀನ್ಸ್ಟಿಟ್ನಲ್ಲಿರುವ ಕೆಲ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಯಿತು. ನಗರಸಭೆ ಆಯುಕ್ತ ಯೋಗಿಶ್ವರ ಹಾಗೂ ಸಿಬ್ಬಂದಿ ದಿಡೀರ್ ಕಾರ್ಯಾಚರಣೆ ನಡೆಸಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿಕೊಂಡವರಿಗೆ ಬಿಸಿ ಮುಟ್ಟಿಸಿದರು. ಪಿಕಳೆ ರಸ್ತೆಯಲ್ಲಿ ವಾಹನ ನಿಲುಗಡೆಗಾಗಿ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾಗಿದ್ದ ಎಚ್.ಡಿ.ಎಫ್.ಸಿ ಬ್ಯಾಂಕ್ನ ಎ.ಟಿ.ಎಂ, ಗ್ರೀನ್ಸ್ಟಿಟ್ನಲ್ಲಿ ಪುಟ್ಬಾತ್ ಮೇಲೆ ನಿರ್ಮಿಸಲಾಗಿದ್ದ ತಾಜ್ ಫಾಸ್ಟ್ಪುಡ್ ಕಟ್ಟಡ ಹಾಗೂ ದೋಬಿಗಾಟ್ ರಸ್ತೆಯಲ್ಲಿನ ಒಂದು ಕಟ್ಟಡವನ್ನು ನೆಲಸಮ ಮಾಡಿದರು. ಕಾನೂನು ಉಲ್ಲಂಗನೆ ಮಾಡಿ ನಿರ್ಮಾಣ ಮಾಡಿದ ಎಲ್ಲಾ ಕಟ್ಟಡದವರಿಗೂ ನೋಟಿಸ್ ನೀಡಿರುವದಾಗಿ ಈ ವೇಳೆ ಅಧಿಕಾರಿಗಳು ತಿಳಿಸಿದರು.
Leave a Comment