ಕಾರವಾರ: ವಾಲಿಬಾಲ್ ಪಂದ್ಯಾವಳಿ ನಡೆಸುವದಾಗಿ ತಿಳಿಸಿ ನಗರಸಭೆ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ವಿರುದ್ದ ಕೇಳಿ ಬಂದಿದೆ. ಈ ಬಗ್ಗೆ ನಗರಸಭೆ ಸದಸ್ಯರೇ ಲಿಖಿತವಾಗಿ ದೂರಿದ್ದಾರೆ.
ವಾಲಿಬಾಲ್ ಪಂದ್ಯಾವಳಿ ನಡೆಸುವದಾಗಿ ತಿಳಿಸಿ ನಗರಸಭೆಯ ಕಾಯ್ದಿರಿಸಿದ ಹಣ ಪಡೆದ ರಾಘು ನಾಯ್ಕ ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಗರಸಭೆಯ 25 ಸಾವಿರ ರೂ ಹಣವನ್ನು ರಾಘು ನಾಯ್ಕ ಬಳಸಿಕೊಂಡಿದ್ದು, ಈ ಬಗ್ಗೆ ನೋಟಿಸ್ನ್ನು ನೀಡಲಾಗಿದೆ. ಈ ಮದ್ಯೆ ನಗರಸಭೆ ಸದಸ್ಯ ರತ್ನಾಕರ ನಾಯ್ಕ ಮೇಲೆ ಹಲ್ಲೆ ನಡೆಸಿರುವ ರಾಘು ನಾಯ್ಕ, ಜನರ ದಿಕ್ಕು ತಪ್ಪಿಸಲು ಪೊಲೀಸರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ನಗರಸಭೆ ಸದಸ್ಯರು ಆರೋಪಿಸಿದ್ದಾರೆ. ರಾಘು ನಾಯ್ಕ ಉದ್ದಟತನ ಮುಂದುವರೆದರೆ ನಗರಸಭೆಯ ಸರ್ವ ಸದಸ್ಯರು ಸೇರಿ ಹೋರಾಟ ನಡೆಸುವದಾಗಿ ಎಚ್ಚರಿಸಿದ್ದಾರೆ.
Leave a Comment