ಕಾರವಾರ:
ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡಿದ್ದ ಡಾ. ದಿನಕರ ದೇಸಾಯಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ದಿವೇಕರ್ ಕಾಲೇಜು ಪ್ರಾಚಾರ್ಯ ಡಾ.ಬಿ.ಎಚ್.ನಾಯಕ ಹೇಳಿದರು.
ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಕೆನರಾ ವೆಲ್ಫೇರ ಟ್ರಸ್ಟ ಡೇ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೇಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿದ ಡಾ. ದಿನಕರ ದೇಸಾಯಿಯವರು ಶಿಕ್ಷಣದ ಹರಿಕಾರರಾಗಿದ್ದಾರೆ. ಡಾ. ದಿನಕರ ದೇಸಾಯಿಯವರು ಶಿಕ್ಷಣ ಕ್ಷೇತ್ರವಲ್ಲದೇ ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಎಂದು ಸ್ಮರಿಸಿದರು.
ಈ ವೇಳೆ ಸಂಧ್ಯಾ ಕದಮ್ರವರು ಬರೆದ “ಉಪನ್ಯಾಸಕಾರ ಸುಶೀಲಾ ಟಾಕಭೌರೆ ಎವಂ ನಾರಿ ಅಸ್ಮಿತಾ” ಎಂಬ ಪುಸ್ತಕ ಬಿಡುಗಡೆ ನಡೆಯಿತು. ಪ್ರಮುಖರಾದ ಪ್ರಕಾಶ ನಾಯಕ, ಉಪನ್ಯಾಸಕರುಗಳಾದ ಡಾ.ಕೇಶವ.ಕೆ.ಜಿ, ಸುರೇಶ ಗುಡಿಮನಿ, ಹರೀಶ ಕಾಮತ, ದೇವಾನಂದ ಗಾಂವಕರ ಇತರರಿದ್ದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕ ಐಕ್ಯೂಎಸಿ ಸಂಯೋಜಕ ಸುರೇಂದ್ರ ದಫೇದಾರ ಪ್ರಸ್ಥಾಪಿಸಿದರು. ವಿನುತಾ ಅಂಬೇಕರ ಸ್ವಾಗತ ಗೀತೆ ಹಾಡಿದರು. ಪ್ರೋ.ನಿತಿನ್ ನಿರ್ವಹಿಸಿದರು. ದೈಹಿಕ ನಿರ್ದೇಶಕ ಡಾ.ಬಿ.ಆರ್.ತೋಳೆ ವಂದಿಸಿರು.
Leave a Comment