ಕಾರವಾರ:
ಭಾನುವಾರ ಚೆಂಡಿಯಾ ಬಳಿಯ ನಾಗರಮುಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಆರೂ ಜನರ ಶವ ಪತ್ತೆಯಾಗಿದೆ.
ಮಂಗಳವಾರ ಬೆಳಗ್ಗೆ ರೇಣುಕಾ ಎಂಬಾಕೆಯ ಮೃತದೇಹ ನೌಕಾನೆಲೆ ಸಮೀಪ ಸಿಕ್ಕಿದೆ. ಮೊದಲ ದಿನ ಇಬ್ಬರ ಮೃತದೇಹ ದೊರೆತಿತ್ತು. ಸೋಮವಾರ ಮೂವರ ಶವ ಪತ್ತೆಯಾಗಿದ್ದು, ರೇಣುಕಾ ಎಂಬಾಕೆಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆಯೂ ಹುಡುಕಾಟ ಮುಂದುವರೆಸಿದಾಗ ರೇಣುಕಾಳ ಶವವೂ ಕಂಡು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಸಿದವರಿಗೆ ಹಸ್ತಾಂತರಿಸಲಾಯಿತು.
Leave a Comment