ಕಾರವಾರ:
ಇಲ್ಲಿನ ರವಿಂದ್ರನಾಥ ಟಾಗೋರ ಕಡಲ ತೀರದಲ್ಲಿ 8ನೇ ಕರ್ನಾಟಕ ನೇವಲ ಬಟಾಲಿಯನ್ ವತಿಯಿಂದ ಅಂತರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ನಿಮಿತ ಕಡಲ ತೀರದ ಸ್ವಚತಾ ಕಾರ್ಯ ನಡೆಯಿತು.
ಎನ್.ಸಿ.ಸಿ ಲೆಪ್ಟನೆಂಟ್ ಕಮಾಂಡಿಂಗ್ ಯು.ಎಚ್. ಸಿಸ್ತಾ ಆದೇಶದ ಮೆರೆಗೆ ಸೇಂಟ್ಜೋಸೆಫ್ಸ ಹೈ ಸ್ಕೂಲ್, ಹಿಂದು ಹೈ ಸ್ಕೂಲ್, ಬಾಪೂಜಿ ಪ. ಪೂ ಮಹಾವಿದ್ಯಾಲಯ ಸದಾಶಿವಗಡದ ವಿದ್ಯಾರ್ಥಿಗಳು ಕಡಲತೀರ ಸ್ವಚ್ಚಗೊಳಿಸಿದರು. ಸೆಂಟ್ಜೋಸೆಫ್ಸ ಹೈ ಸ್ಕೂಲಿನ ಎನ್.ಸಿ.ಸಿ ಚೀಫ್ ಆಫೀಸರ್ ಅನಿಲ್ ಮಡಿವಾಳ ಹಾಗೂ ಅರುಣ ಕೇಣಿ ಮಕ್ಕಳಿಗೆ ಸ್ವಚ್ಚತೆಯ ಕುರಿತು ವಿವರಿಸಿದರು. ಸಬ್ ಲೆಪ್ಟನೆಂಟ್ ಕಮಾಂಡರ್ ರಾಜೇಶ ಸೈಲ್ ಇತರರಿದ್ದರು.
Leave a Comment