ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾದಲ್ಲಿ ದಿನಾಂಕ 21/09/2017ರ ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷ ಪೂರ್ಣಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಬಹಳ ಅದ್ಧೂರಿಯಿಂದ ಜರುಗಿತು. ಪದ್ಮಶ್ರೀ ಪುರಸ್ಕøತರು ಹಾಗೂ ಪ್ರಖ್ಯಾತ ಯಕ್ಷಗಾನ ಕಲಾವಿದರು ಆಗಿರುವ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಹಾಗೂ ನೆರೆದಂತ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು, ಶ್ರೀ ಉಪೇಂದ್ರ ಪೈ, ಶಿರಸಿ, ಸಮಾಜ ಸೇವಕರು ಹಾಗೂ ಖ್ಯಾತ ಉದ್ಯಮಿಗಳು, ಶ್ರೀಮತಿ ಅನ್ನಪೂರ್ಣ ಶಾಸ್ತ್ರಿ ಅಧ್ಯಕ್ಷರು, ಗ್ರಾಮ ಪಂಚಾಯತ ನಗರಬಸ್ತಿಕೇರಿ, ಶ್ರೀ ರಾಘವೇಂದ್ರ ನಾಯ್ಕ, ಸದಸ್ಯರು, ಗ್ರಾಮ ಪಂಚಾಯತ ನಗರಬಸ್ತಿಕೇರಿ ಹಾಗೂ ಇನ್ನಿತರ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮಾತನಾಡಿ, ಯಕ್ಷಗಾನವು ಒಂದು ತಂಡದ ಜೀವನಕ್ಕೆ ಒಂದು ದಾರಿ, ಜೀವನಕ್ಕೆ ಒಂದು ಪಾಠ, ಜೀವನಕ್ಕೆ ಇದು ಒಂದು ಆಶೀರ್ವಾದ ಎನ್ನುತ್ತಾ ಈ ಯಕ್ಷಗಾನಕ್ಕಾಗಿ ವೇದಿಕೆಯನ್ನು ಕಲ್ಪಿಸಿಕೊಟ್ಟ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರಿಗೆ ಧನ್ಯವಾದವನ್ನು ಸಲ್ಲಿಸಿದರು.
ನಂತರದಲ್ಲಿ ಶ್ರೀ ಉಪೇಂದ್ರ ಪೈ, ಶಿರಸಿ ರವರು ಮಾತನಾಡಿ, ಶ್ರೀಕ್ಷೇತ್ರಕ್ಕೆ ಒಳ್ಳೆಯ ಉದ್ದೇಶ ಇಟ್ಟು ಬಂದರೆ ಆ ಉದ್ದೇಶ ಖಂಡಿತವಾಗಿ ಈಡೇರುತ್ತದೆ, ಇಂತಹ ಪುಣ್ಯ ಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಿಸುವುದು ಬಹಳ ಭಾಗ್ಯದ ವಿಷಯ ಎಂದರು.
ನಂತರದಲ್ಲಿ ಶ್ರೀ ರಾಘವೇಂದ್ರ ನಾಯ್ಕ ರವರು ಮಾತನಾಡಿ, ಶ್ರೀಕ್ಷೇತ್ರದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳ ಮಹತ್ವಾಕಾಂಕ್ಷೆ ಬಹಳ ಉತ್ತುಂಗತವಾಗಿರುತ್ತದೆ, ಪ್ರತಿ ವರ್ಷ ಈ ವರ್ಷವೂ ಕೂಡಾಹಮ್ಮಿಕೊಂಡಂತಹ ಯಕ್ಷಪೂರ್ಣಿಮೆ ಕಾರ್ಯಕ್ರಮದ ಮನೋರಂಜನೆಯನ್ನು ಪಡೆಯುವುದರ ಜೊತೆಗೆ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಬೇಕು ಎಂದು ಮನವಿಯನ್ನು ಮಾಡಿಕೊಂಡರು.
ನಂತರದಲ್ಲಿ ಶ್ರೀಮತಿ ಅನ್ನಪೂರ್ಣಾ ಎಸ್. ಶಾಸ್ತ್ರಿಯವರು ಮತನಾಡಿ, ಯಕ್ಷಗಾನವು ಅಳಿವಿನ ಅಂಚಿನಲ್ಲಿರುವ ಒಂದು ಜಾನಪದ ಕಲೆ, ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರಿಗೆ ಧನ್ಯವಾದವನ್ನು ಅರ್ಪಿಸಿದರು.
ಕೊನೆಯಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಾತನಾಡಿ, ಕಲೆ ಮನುಷ್ಯನ ಒಂದು ಅವಿಭಾಜ್ಯ ಅಂಗ, ಕಲೆಯನ್ನು ಹೊಂದಿರದ ವ್ಯಕ್ತಿ ಯಾರೂ ಇಲ್ಲ, ಕಲಾವಿದನದ ಕಲೆಯನ್ನು ನೋಡಿ ಆಸ್ವಾದಿಸುವುದೂ ಒಂದು ಕಲೆ, ಕಲಾವಿದನಿಗೆ ಇರುವಷ್ಟೇ ಗೌರವ ಕಲಾಭಿಮಾನಿಗೂ ಇರುತ್ತದೆ. ಕಲಾಭಿಮಾನಿಗಳ ಪ್ರೋತ್ಸಾಹದ ಚಪ್ಪಾಳೆಯೇ ಕಲಾವಿದನ ಮೆಟ್ಟಿಲು. ಮನುಷ್ಯ ಹೇಗೆ ಬಾಳಬೇಕು, ಹೇಗೆ ಬದುಕಬೇಕು, ಎನ್ನುವ ವಿಷಯವನ್ನು ಈ ಕಲೆಗಳು ನಮಗೆ ತಿಳಿಸಿಕೊಡುತ್ತವೆ. ಕಲಾವಿದನು ತನ್ನ ವ್ಯಯಕ್ತಿಕ ನೋವು ಸಂಕಷ್ಟಗಳನ್ನು ಮರೆತು ಕಲಾಭಿಮಾನಿಗಳಿಗೆ ಮನರಂಜನೆಯನ್ನು ನೀಡುವಲ್ಲಿ ನಿರತನಾಗುತ್ತಾನೆ. ಪ್ರತಿಯೊಬ್ಬರನ್ನು ರಂಜಿಸುವ ಕಲಾವಿದನ ಕಷ್ಟವನ್ನು ವಿಚಾರಿಸುವವರ ಸಂಖ್ಯೆ ಅತಿ ಕಡಿಮೆಯಾಗಿದೆ, ಕಲಾವಿದನ ಪೋಷಣೆ ಮತ್ತು ರಕ್ಷಣೆ ಅಗತ್ಯವಾದ ಕಾರಣ ಪ್ರತಿಯೊಂದು ರಂಗದ ಪ್ರತಿಯೊಬ್ಬ ಕಲಾವಿದನಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಿದರೆ ಕಲಾವಿದನಿಗೆ ಆಧಾರವಾಗುತ್ತದೆ. ಈ ಯಕ್ಷ ಪೂರ್ಣಿಮೆಯಲ್ಲಿ ಪಾಲ್ಗೊಳ್ಳುವ ನೂರಾರು ಕಲಾವಿದರ ಜೀವನ ಸುಖಮಯವಾಗಲಿ ಎಂದು ಆಶೀರ್ವದಿಸಿದರು.
ಸಭಾ ಕಾರ್ಯಕ್ರಮದ ನಂತರ “ಶ್ರೀದೇವಿ ಮಹಾತ್ಮೆ” ಎಂಬ ಸುಂದರವಾದ ಪೌರಾಣಿಕ ಯಕ್ಷಗಾನ ಪ್ರದರ್ಶನವಾಯಿತು. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಈ ಯಕ್ಷಗಾನ ಪ್ರಸಂಗದಲ್ಲಿ ಪಾತ್ರವನ್ನು ನಿರ್ವಹಿಸಿದ್ದು ವಿಶೇಷ ಆಕರ್ಷಣೆಯನ್ನು ಹೊಂದಿತ್ತು. ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ನಡೆದ ಈ ಯಕ್ಷಗಾನ ಕಾರ್ಯಕ್ರಮಕ್ಕೆ ನೂರಾರು ಮಂದಿ ಕಲಾಭಿಮಾನಿಗಳು ಆಗಮಿಸಿ ಯಕ್ಷಗಾನದ ಮನರಂಜನೆಯನ್ನು ಪಡೆಯುತ್ತಾ ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ, ಯಕ್ಷ ಪೂರ್ಣಿಮೆಯ ಮೊದಲದಿನದ ಯಕ್ಷಗಾನ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು
Leave a Comment