ಕಾರವಾರ:
ರೋಟರಿ ಸಂಸ್ಥೆ ವತಿಯಿಂದ ಮಕ್ಕಳಿಗೆ ಆಗುವ ಲೈಂಗಿಕ ದೌರ್ಜನ್ಯದ ಸಕಾರಾತ್ಮಕ ನಿರ್ವಹಣೆಯ ಬಗ್ಗೆ ಪಾಲಕರಿಗಾಗಿ ಕಾರ್ಯಾಗಾರ ನಡೆಸಲಾಯಿತು.
ಸ್ತ್ರೀರೋಗ ತಜ್ಞೆ ಡಾ. ರಾಜಲಕ್ಷ್ಮಿ ಉಪನ್ಯಾಸ ನೀಡಿದರು. ಹೆಣ್ಣು ಮಕ್ಕಳಿಗಾಗುವ ಲೈಂಗಿಕ ದೌರ್ಜನ್ಯ, ಪಾಲಕರಿಗೆ ಮಾರ್ಗದರ್ಶನ, ಸೈಬರ ಅಪರಾಧ ಹಾಗೂ ಹೆಣ್ಣು ಮಕ್ಕಳ ಋತು ನೈರ್ಮಲ್ಯದ ನಿರ್ವಹಣೆಯ ಬಗ್ಗೆ “ಸ್ಲೈಡ್ ಶೋ” ಮೂಲಕ ತರಬೇತಿಯನ್ನು ನೀಡಿದರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ಎಮ್. ಪಿ. ಕಾಮತ, ರಾಜೇಶ ವರ್ಣೇಕರ, ಸುಶಿಲಾ ಗಾಂವಕರ, ಸಾತಪ್ಪಾ ತಾಂಡೇಲ, ಅಮರನಾಥ ಶೆಟ್ಟಿ, ಸುನಿಲ ಸೋನಿ, ರಾಘವೇಂದ್ರ ಪ್ರಭು, ಅನಮೋಲ ರೇವಣಕರ ಇತರರಿದ್ದರು.
Leave a Comment