ಕಾರವಾರ:
ಕಾಜುಬಾಗದ ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥರಾಗಿದ್ದ ವೃದ್ಧರೋರ್ವರನ್ನು ಗೌರಿ ಸಾಂತ್ವನ ಮಹಾದೇವ ಕೃಪಾ ಜನಸೇವಾ ಕೇಂದ್ರದ ಮುಖ್ಯಸ್ಥ ಶ್ರೀಕಾಂತ ನಾಯ್ಕ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಅಂಕೋಲಾ ಮೂಲದ ಶೇಖರ ಶೇಷು ನಾಯ್ಕ (65) ಎಂಬುವವರು ಅರ್ಜುನ ಟಾಕೀಸ್ನಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈಗ ಅವರಿಗೆ ವಯಸ್ಸಾದ ಕಾರಣ ಕೆಲಸದಿಂದ ತೆಗೆದು ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಅನ್ಯ ದಾರಿ ಕಾಣದ ಈ ವೃದ್ಧರು ಟಾಕೀಸಿನ ಬಳಿಯೇ ವಾಸ್ತವ್ಯ ಮಾಡಿಕೊಂಡಿದ್ದರು. ವಿಷಯ ತಿಳಿದ ಹಿರಿಯ ನಾಗರಿಕರ ಸಹಾಯವಾಣಿಯವರು ಅವರನ್ನು ಶ್ರೀಕಾಂತ ನಾಯ್ಕ ಸಹಕಾರದೊಂದಿಗೆ 108 ಅಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
Leave a Comment