ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಸಭೆಯ ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ ವಿರುದ್ಧ ಸ್ಥಳೀಯ ಅಂಗಡಿಕಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಳಿಯಾಳ ಘಟಕ ವತಿಯಂದ ಜಿಲ್ಲಾಧಿಕಾರಿಯವರಿಗೆ ಬರೆದ ಮನವಿಯನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ : ಭಟ್ಕಳದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆದಂತಹ ಲೋಪದೋಷದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿರುವಾಗ ಸರಕಾರದ ಸುತ್ತೋಲೆಯನ್ನು ಮೀರಿ ಬಾಹೀರ ಶಕ್ತಿಗಳು ಆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮನಸೋಇಚ್ಛೆ ದರಪಟ್ಟಿ ಏರಿಸಿ ಹಿಂದಿನ ಅಂಗಡಿಕಾರರು ಪಡೆದುಕೊಳ್ಳದೇ ಇರುವ ಹಾಗೆ ದರವನ್ನು ಏರಿಸಿ ಅಂಗಡಿ ಮಳಿಗೆಗಳನ್ನು ಪಡೆದಿರುತ್ತಾರೆ. ಅದರ ವಿರುದ್ಧ ಹಿಂದಿನ ಅಂಗಡಿ ಮಳಿಗೆಗಳ ಬಾಡಿಗೆದಾರರು ತಮ್ಮ ಅಂಗಡಿಗಳನ್ನು ಬಿಟ್ಟುಕೊಡದೇ ಪ್ರತಿಭಟನೆಯನ್ನು ನಡೆಸಿದ್ದರು. ಇದರಲ್ಲಿ ರಾಮಚಂದ್ರ ನಾಯ್ಕ ಮೈಮೇಲೆ ಸೀಮೆ ಎಣ್ಣೆಯನ್ನು ಸುರಿದುಕೊಂಡು ಪುರಸಭೆ ಅಧಿಕಾರಿಗಳ ಮತ್ತು ಆರಕ್ಷಕರ ಸಮ್ಮುಖದಲ್ಲಿ ಬೆಂಕಿಯನ್ನು ಹಚ್ಚಿಕೊಂಡು ಆಸ್ಪತ್ರೆಯಲ್ಲಿ ಸಾವನ್ನು ಅಪ್ಪಿದರು. ಹೀಗಿದ್ದಾಗ ಭಟ್ಕಳ ಪುರಸಭೆ ವಿರುದ್ಧ ಸ್ಥಳಿಯರು ಪ್ರತಿಭಟನೆ ನಡೆಸಿದಾಗ ಭಟ್ಕಳ ಪುರಸಭೆ ವಿರುದ್ಧ ಪ್ರಕರಣವನ್ನು ದಾಖಲಿಸದೇ ನಿರಪರಾಧಿ ಜನರ ವಿರುದ್ಧ ಸ್ಥಳೀಯ ಆರಕ್ಷಕ ಇಲಾಖೆಯವರು ಪ್ರಕರಣ ದಾಖಲಿಸಿ ಅಮಾಯಕರನ್ನು ಬಂಧಿಸಿರುವುದು ಖಂಡನೀಯವಾಗಿದೆ ಎಂದಿದ್ದಾರೆ.
ರಾಜ್ಯ ಕಾಂಗ್ರೇಸ್ ಸರ್ಕಾರ ಬಿ.ಜೆ.ಪಿಯನ್ನು ದಮನಿಸುವ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ನಾಯ್ಕ ಮತ್ತು ಇತರ ಬಿ.ಜೆ.ಪಿ ನಾಯಕರ ವಿರುದ್ಧ ದಾಖಲಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಮತ್ತು ಕರ್ನಾಟಕ ಸರಕಾರ ತಕ್ಷಣ ರೂ.25ಲಕ್ಷಗಳನ್ನು ನೀಡಿಬೇಕು ಅಲ್ಲದೇ ಪುರಸಭೆಯ ಅಂಗಡಿಯ ಮಳಿಗೆಗಳನ್ನು ಈ ಹಿಂದೆ ನೀಡಿದ ಬಾಡಿಗೆದಾರರಿಗೆ ಹಿಂದೆ ನೀಡಿದ ದರದಲ್ಲಿಯೇ ಮುಂದುವರೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಹಳಿಯಾಳ ಘಟಕ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮಾಜಿ ಶಾಸಕ ಸುನೀಲ ಹೆಗಡೆ, ರಾಜು ಧೂಳಿ, ವಿ.ಎಮ್ ಪಾಟೀಲ್, ಸೋನಪ್ಪಾ ಸುಣಕಾರ, ಎಸ್ ಎ ಶೇಟವಣ್ಣವರ, ಎಲ್ ಎಸ್ ಅರಶೀಣಗೇರಿ, ಅನೀಲ್ ಮುತ್ನಾಳೆ, ರಾಘವೇಂದ್ರ ಚಲವಾದಿ, ವಿಜಯಲಕ್ಷ್ಮೀ ಚವ್ಹಾಣ, ನೀತಾ ಭಂಡಗಿ, ತೆಯಬ್ ಮುಲ್ಲಾ ಸಂಜು ಹೀರೆಕರ, ಗೀರಿಶ ಠೋಸುರ, ವಾಸುದೇವ ಪೂಜಾರಿ, ಕೃಷ್ಣಾ ತೊರ್ಲೆಕರ, ನಾರಾಯಣ ಬೆಳಗಾಂವಕರ, ಪ್ರದೀಪ ಹಿರೇಕರ ಇನ್ನಿತರರು ಇದ್ದರು.
Leave a Comment