ಹಳಿಯಾಳ: ಅಂಗವಿಕಲರಿಗೆ ಅನುಕಂಪ ತೊರಿಸಿದೆ ಅವರಲ್ಲಿರುವ ಪ್ರತಿಭೆಗಳನ್ನು ಬೆಳಗಿಸಲು ಅವಕಾಶ ಮಾಡಿಕೊಟ್ಟರೇ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನುಡಿದರು.
ಪಟ್ಟಣದ ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆವರಣದಲ್ಲಿ ವಿ.ಆರ್.ಡಿ.ಎಮ್ ಟ್ರಸ್ಟ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಮಗೆ ಕೊಡಲಾಗುವ ಸಾಧನೆ-ಸಲಕರಣೆಗಳ ಸರಿಯಾದ ಉಪಯೋಗ ಮಾಡಿಕೊಂಡು. ಆರ್ಥಿಕವಾಗಿ ಸದೃಢರಾಗುವ ಮೂಲಕ ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಿರಿ ಎಂದು ಸಚಿವರು ಕರೆ ನೀಡಿದರು.
ಕ್ಷೇತ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮೂಲಕ ಅಭಿವೃದ್ಧಿ ಕೈಗೊಳ್ಳಲಾಗಿದ್ದು ಜಿಲ್ಲೆಯಾದ್ಯಾಂತ ಕಾಂಗ್ರೇಸ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದರು.
ಟಿ.ವಿ.ಎಸ್ ಮೋಟಾರ ಕಂಪನಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ ವೇಣು ಮಾತನಾಡಿ ಸಚಿವರ ಸದೂದ್ದೇಶದಿಂದ ನಾನು ಪ್ರಭಾವಿತನಾಗಿದ್ದೇನೆ ಅವರ ಇಚ್ಛೆಯಂತೆ ನಮ್ಮ ಕಂಪನಿ ಅಂಗವೀಕಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂತ್ರಪ್ತಿಯಾಗಿದೆ ಎಂದ ಅವರು ಸಚಿವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದ ನಮ್ಮ ಕಂಪನಿ ಪ್ರತಿ ವರ್ಷ 2 ಮಿಲಿಯನ್ ಮೋಟಾರ ವಾಹನಗಳ ಉತ್ಪಾದನೆಯನ್ನು ಮಾಡುತ್ತಿದೆ ಎಂದರು.
ಸಚಿವರು ಟಿ.ವಿ.ಎಸ್ ಮೋಟಾರ ಕಂಪನಿ ಲಿಮಿಟೆಡ್ ಬೆಂಗಳೂರು ವತಿಯಿಂದ 60 ತ್ರಿ-ಚಕ್ರ ವಾಹನ ಸೀತಾರಾಮ ಜಿಂದಾಲ್ ಪೌಂಡೆಸನ್ ಬೆಂಗಳೂರು 20 ಮತ್ತು ಜೈ ಶಿವಶಕ್ತಿ ಆ್ಯಂಡ್ ಎಜ್ಯುಕೇಶನ್ ಪೌಂಡೇಷನ್ ಬೆಂಗಳೂರಿನ ವತಿಯಿಂದ 3, ಹ್ಯಾವ ಎ ಹಾರ್ಟ ಪೌಂಡೇಷನ್ ತ್ರಿ-ಚಕ್ರ ವಾಹನ 3 ಹೀಗೆ ಒಟ್ಟೂ 86 ತ್ರಿ-ಚಕ್ರ ವಾಹನ, ದಿವ್ಯಾಂಗರಿಗೆ ಶ್ರವಣ ಸಾಧನ 125, ಬಡ ಪ್ರತಿಭಾವಂತ ವಿದ್ಯಾರ್ಥಿಯರಿಗೆ ತಲಾ 10 ಸಾವಿರ ಶಿಷ್ಯ ವೇತನ, ಆರ್.ಸೆಟಿ ಸಂಸ್ಥೆಯಲ್ಲಿ ವಾಹನ ರಿಪೇರಿ ತರಭೇತಿ ಪಡೆದ ವಿದ್ಯಾರ್ಥಿಗಳಿಗೆ ಭಾಶ್ ಕಂಪನಿಯ ಟೊಲ್ಸ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಟಿ.ಎಸ್ ಮೋಟಾರ ಕಂಪನಿಯ ಕಾರ್ಪೊರೇಟ್ ರಿಲೇಶನ್ ವಿಭಾಗ ಉಪಾಧ್ಯಕ್ಷ ವಿ.ಆರ್ ಕರುನಾಕರ ರೆಡ್ಡಿ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೆಕರ, ರಮೇಶ ನಾಯ್ಕ, ತಾಪಂ ಅಧ್ಯಕ್ಷ ರೀಟಾ ಸಿದ್ದಿ, ಉಪಾಧ್ಯಕ್ಷ ನೀಲವ್ವಾ ಮಡಿವಾಳ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಸುಭಾಸ ಕೊರ್ವೆಕರ ಇದ್ದರು.
ವಿ.ಆರ್.ಡಿ.ಎಮ್ ಟ್ರಸ್ಟ ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ ಸ್ವಾಗತಿಸಿದರು, ಶ್ರೀಧರ ಬೂಮಣ್ಣವರ ಮತ್ತು ನೆಲ್ಸಿ ಫರ್ನಾಡಿಸ್ ನಿರೂಪಿಸಿದರು, ಆರ್ಸೆÉಟಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ವಂದಿಸಿರು.
Leave a Comment