ಹಳಿಯಾಳ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಹಾಗೂ ಅವಕಾಶವಂಚಿತರಾದ ಜನತೆಯ ಒಳಿತಿಗಾಗಿ ರಾಜ್ಯ ಕಾಂಗ್ರೇಸ್ ಸರ್ಕಾರ ಹಲವಾರು ನೂತನ ಯೋಜನೆಗಳನ್ನು ರೂಪಿಸುವ ಮೂಲಕ ನೇರವಾಗಿದ್ದು ಬಡವರ, ದಿನ ದಲಿತರ, ಸಾಮಾನ್ಯ ವರ್ಗದ ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
“ಮನೆ ಮನೆಗೆ ಕಾಂಗ್ರೇಸ್” ಅಭಿಯಾನದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಬೂತ ನಂ 87 ವಾರ್ಡ ನಂ.3ರ ಗೌಳಿಗಲ್ಲಿಯಲ್ಲಿ ಮನೆ ಮನೆಗೆ ತೆರಳಿದ ಸಚಿವ ದೇಶಪಾಂಡೆ ಅವರು ಈ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಮೊದಲು 2013 ರ ಚುನಾವಣೆಯ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು ಇವುಗಳಲ್ಲಿ 158 ಭರವಸೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಾಭೀತು ಪಡಿಸಿದ್ದೇವೆ ಎಂದರು.
ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 214 ಬೂತಗಳಿದ್ದು ಹಳಿಯಾಳ ತಾಲೂಕಿನಲ್ಲಿ 116 ಬೂತಗಳಿವೆ. ಪಟ್ಟಣದಲ್ಲಿ 17 ಬೂತಗಳಿದ್ದು ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆಗಳ ಮಾಹಿತಿಯ ವಿವರಗಳನ್ನು ಎಲ್ಲಾ ಮತಗಟ್ಟೆಗಳ ಪ್ರತಿ ಮನೆ ತಲುಪಿಸುವ ಜವಾಬ್ದಾರಿ ಪಕ್ಷದ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರಾಗಿದೆ ಎಂದು ಸಚಿವರು ಹೇಳಿದರು.
ಅಭಿಯಾನದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಮಾಲಾ ಬ್ರಗಾಂಜಾ, ಸದಸ್ಯರಾದ ಶಂಕರ ಬೆಳಗಾಂವಕರ, ಪ್ರಮುಖರಾದ ಸಿವಿ ನುಚ್ಚಂಬ್ಲಿ, ಅನಿಲ ಚವ್ವಾಣ, ಸಂತೋಷ ಹುಂಡೇಕರ, ಜಿಡಿ ಗಂಗಾಧರ, ಈರಣ್ಣಾ ಸಿಂಗ್, ಅಣ್ಣಪ್ಪಾ ಪಾಟೀಲ್, ಮಂಜು ಇತರರು ಇದ್ದರು.
ಪೊಟೊ:- 23ಎಚ್.ಎಲ್.ವೈ2 ಹಳಿಯಾಳ: ಮನೆ ಮನೆಗೆ ಕಾಂಗ್ರೇಸ ಅಭಿಯಾನದ ಅಂಗವಾಗಿ ಸಚಿವ ಆರ್.ವಿ ದೇಶಪಾಂಡೆ ಗೌಳಿಗಲ್ಲಿಯ ಮನೆಗೆ ತೆರಳಿ ಪಕ್ಷದ ಸಾಧನೆಗಳ ಕೈಪಿಡಿಯನ್ನು ಮತದಾರರಿಗೆ ನೀಡುತ್ತಿರುವುದು.
Leave a Comment