ರೋಟರಿ ಕ್ಲಬ್ ವತಿಯಿಂದ ಕಾರವಾರದ ಶಿರವಾಡದಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಡಾ. ಸಮೀರಕುಮಾರ ನಾಯಕ ಹಲ್ಲುಗಳ ರಕ್ಷಣೆ ಮತ್ತು ಅವುಗಳನ್ನು ಸುವ್ಯವಸ್ಥಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿಸಿದರು. ರೋಟರಿ ಅಧ್ಯಕ್ಷ ರಾಜೇಶ ವೇರ್ಣೆಕರ್, ಪ್ರಮುಖರಾದ ಮಾರುತಿ ಕಾಮತ್, ಅಮರ್ನಾಥ ಶೆಟ್ಟಿ ಇತರರಿದ್ದರು. ಮುಖ್ಯಾಧ್ಯಾಪಕ ಧ್ರುವ ಆಗೇರ್ ಸ್ವಾಗತಿಸಿದರು. ಸಾತಪ್ಪ ತಾಂಡೇಲ್ ವಂದಿಸಿದರು.
Leave a Comment