ಕಾರವಾರ:
ಶಿಸ್ತಿನ ಸಿಪಾಯಿಯಂತಿದ್ದ ಪಂಡಿತ್ ದೀನ ದಯಾಳರ ಆದರ್ಶವನ್ನು ಎಲ್ಲರೂ ಪಾಲಿಸಬೇಕಿದೆ ಎಂದು ತಾಲೂಕು ಪಂಚಾಯತ ಸದಸ್ಯ ಪುರುಷೋತ್ತಮ ಗೌಡ ಹೇಳಿದರು.
ಅವರು ನೆಹರು ಯುವ ಕೇಂದ್ರ, ತಾಲೂಕಾ ಯುವ ಒಕ್ಕೂಟ, ಮಾಚಿದೇವ ಯುವಕ ಸಂಘದ ಆಶ್ರಯದಲ್ಲಿ ಅಮದಳ್ಳಿಯಲ್ಲಿ ನಡೆದ “ಪಂಡಿತ್ ದೀನದಯಾಳ ಜನ್ಮ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ತಾಳ್ಮೆ ಹಾಗೂ ಶಿಸ್ತನ್ನು ರೂಡಿಸಿಕೊಂಡವರು ಯಶಸ್ಸು ಸಾಧಿಸುತ್ತಾರೆ ಎಂದು ಅವರು ಹೇಳಿದರು. ನೇತಾಜಿ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ತೋಕು ಹರಿಕಂತ್ರ, ಗ್ರಾಮ ಪಂಚಾಯತ ಸದಸ್ಯೆ ಜೀವನಾ ಅಮದಳ್ಳಿ, ಶ್ರೀಧರ ತಳೇಕರ್ ಮಾತನಾಡಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ಮಂಜುನಾಥ ಮುದ್ಗೇಕರ, ಪ್ರಮುಖರಾದ ಶಿಲ್ಪಾ ಮಚ್ಚಳ್ಳಿಮಠ, ವಿಶ್ವನಾಥ ಮಡಿವಾಳ, ಅಜಯ ಮಡಿವಾಳ, ಪ್ರಜತ್ ಮಡಿವಾಳ, ಸೈಲೇಶ್ ಮಚ್ಚಳ್ಳಿಮಠ ಇತರರಿದ್ದರು. ರಾಜೇಶ ಮಡಿವಾಳ ಸ್ವಾಗತಿಸಿದರು. ಅಭಿಷೇಕ ಮಡಿವಾಳ ವಂದಿಸಿದರು.
Leave a Comment