ಹೊನ್ನಾವರ:
ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ಬೋಟ್ವೊಂದು ಶರಾವತಿ ಅಳವೆಯಲ್ಲಿ ಮುಳುಗಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕಾಸರಗೋಡು ಮೂಲದ ಅಬ್ದುಲ್ ಮುತಾಲಿಬ್ ರೋಶನ್ ಮುಲ್ಲಾ ಎಂಬಾತರಿಗೆ ಸೇರಿದ ಯಾಸಿನ್ ಎಂಬ ಬೋಟು ಮುಳುಗಿದೆ. ಬೋಟ್ನಲ್ಲಿದ್ದ 25 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದರು. ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಳವೆ ಪ್ರದೇಶದಲ್ಲಿ ಹಿಂದಿನಿಂದಲೂ ಒಂದಿಲ್ಲೊಂದು ಅವಘಡ ನಡೆಯುತ್ತಲೇ ಇದೆ. ಹೀಗಾಗಿ ಅಳವೆ ಪ್ರದೇಶದಲ್ಲಿ ತುಂಬಿರುವ ಹೂಳು ತೆಗೆಯುವಂತೆ ಪರ್ಶಿಯನ್ ಮೀನುಗಾರರ ಸಂಘಟನೆ ಆಗ್ರಹಿಸಿದೆ
Leave a Comment