ಕಾರವಾರ:
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ ನಡೆಯಿತು.
ಕಾಲೇಜು ಆವರಣದಲ್ಲಿ ನಿರ್ಮಿಸಿದ ಉದ್ಯಾನವನವನ್ನು ಪ್ರಾಚಾರ್ಯೆ ಕಲ್ಪನಾ ಕೆರವಡಿಕರ್ ಉದ್ಘಾಟಿಸಿದರು. ವಿದ್ಯಾರ್ಥಿಗಳೇ 10 ಗುಂಟೆ ಕ್ಷೇತ್ರದಲ್ಲಿ ಉದ್ಯಾನವನ ನಿರ್ಮಿಸಿರುವದಕ್ಕೆ ಪ್ರಾಚಾರ್ಯರು ಸಂತಸ ವ್ಯಕ್ತಪಡಿಸಿದುರ. ನಂತರ ಯುವ ಸ್ಪಂದನ ವತಿಯಿಂದ ಅರಿವು ಕಾರ್ಯಕ್ರಮ ನಡೆಯಿತು. ಯುವಸ್ಪಂದನ ಕೇಂದ್ರದ ರಾಜೇಶ ಮಡಿವಾಳ ಮತ್ತು ನಮಿತಾ ಬಾಂದೇಕರ ಕಾರ್ಯಕ್ರಮ ನಡೆಸಿದರು. ಪ್ರೊ. ಶಾರದಾ ಭಟ್, ಪ್ರೊ. ಆಯ್. ಕೆ. ನಾಯ್ಕ, ಯೂನಿಯನ್ ಚೇರಮನ್ ಪ್ರೊ. ವಿದ್ಯಾ ನಾಯಕ ವೇದಿಕೆಯಲ್ಲಿದ್ದರು.
Leave a Comment