ಕಾರವಾರ:
ಗೋವಾದಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸುರವದಕ್ಕೆ ಜಯ ಕರ್ನಾಟಕ ಸಂಘಟನೆ ತೀವೃ ಆಕ್ಷೇಪ ವ್ಯಕ್ತಪಡಿಸಿದೆ.
ಬೈನಾ ಕಡಲತೀರದಲ್ಲಿ ಅತಂತ್ರರಾಗಿರುವ ಕನ್ನಡಿಗರಿಗೆ ಕೂಡಲೇ ನೆರವು ನೀಡಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರಿಗೆ ಜಯ ಕರ್ನಾಟಕ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕಳೆದ 40 ವರ್ಷಗಳಿಂದ ಗೋವಾದಲ್ಲಿ ಕನ್ನಡಿಗರು ವಾಸವಿದ್ದಾರೆ. ವಿವಿಧ ವ್ಯಾಪಾರ ಹಾಗೂ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಗಿರುವ ಅವರನ್ನು ಒಕ್ಕಲೆಬ್ಬಿಸುವದರಿಂದ ಬದುಕು ಬೀದಿಗೆ ಬರುತ್ತದೆ. ಗೋವಾ ಸರ್ಕಾರ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯವೆಸಗುತ್ತ ಬಂದಿದ್ದು, ಇದನ್ನು ಖಂಡಿಸಬೇಕಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದರು. ಈ ವರೆಗೆ ಸುಮಾರು 800 ಕನ್ನಡಿಗರ ಮನೆಯನ್ನು ಗೋವಾ ಸರ್ಕಾರ ನೆಲಸಮ ಮಾಡಿದೆ. ಉತ್ತರ ಕರ್ನಾಟಕದ ಜನ ಉದ್ಯೋಗಕ್ಕಾಗಿ ಗೋವಾಗೆ ತೆರಳಿದ್ದು, ಎಲ್ಲರೂ ಬಡವರಾಗಿದ್ದಾರೆ. ಏಕಾಏಕಿ ಮನೆಗಳನ್ನು ತೆರವು ಮಾಡಿದ್ದರಿಂದ ಅಲ್ಲಿನ ಜನ ತೊಂದರೆ ಅನುಭವಿಸುತ್ತಿದ್ದು, ರಾಜ್ಯ ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ದಿಲೀಪ ಅರ್ಗೇಕರ್, ದಿವ್ಯಾ ದೇವಿದಾಸ, ರೋಶನ್ ಹರಿಕಂತ್ರ, ಸುಭಾಷ ಗುನಗಿ ಇತರರಿದ್ದರು.
Leave a Comment