ಕಾರವಾರ:
2009ರಲ್ಲಿ ವನ್ಯಜೀವಿ ಭೇಟೆ ನಡೆಸಿದ್ದ ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಕದ್ರಾ ಅರಣ್ಯ ವ್ಯಾಪ್ತಿಯಲ್ಲಿ ವಿಶಾಂತಡಿ ಕೋಸ್ಟಾ, ಮೀನನ್ ಫರ್ನಾಂಡಿಸ್, ಬಸ್ತಾವ್ಯ ಫನಾಂಡಿಸ್ ಎಂಬಾತರು 20 ಅಕ್ಟೊಬರ್ 2009ರಲ್ಲಿ ವನ್ಯಜೀವಿ ಹತ್ಯೆ ನಡೆಸಿದ್ದರು. ಆರೋಪಿಗಳ ಬಳಿ ಚಿಗರೆ ಕೋಡು, ಚಿರತೆ ಚರ್ಮ ಹಾಗೂ ಭೇಟೆಗೆ ಬಳಸಿದ್ದ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶ ಮಹೇಶ ಚಂದ್ರಕಾಂತ ಮೂವರು ಆರೋಪಿಗಳಿಗೆ 3 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಬಿ ಮುಲ್ಲಾ ವಾದಿಸಿದ್ದರು.
Leave a Comment