ಕಾರವಾರ: ಕೆರವಡಿಯ ಗೌಸ್ವಾಡದ ಮನೆಯೊಂದರ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿ ಪರಾರಿಯಾದ ಘಟನೆ ರಾತ್ರಿ ನಡೆದಿದೆ.
ಗೌಸ್ವಾಡದ ನಿವಾಸಿ ರಾಜೇಶ ನಾಯ್ಕ ಅವರ ಮಾಲೀಕತ್ವದ ಮನೆಯಲ್ಲಿ ಕಳುವಾಗಿದೆ. ಮನೆಯವರು ಹತ್ತಿರದ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಾಂಡೀಯಾ ನೃತ್ಯ ವೀಕ್ಷಿಸಲು ತೆರಳಿದಾಗ ಈ ಬಗ್ಗೆ ಮಾಹಿತಿ ಪಡೆದ ಕಳ್ಳರು ಅಡುಗೆ ಕೋಣೆಯ ಮೇಲಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು 20 ಸಾವಿರ ರೂ ಮೌಲ್ಯದ ತಲಾ ಒಂದು ತೊಲೆಯ ಎರಡು ಬಂಗಾರದ ಚೈನ್ಗಳು ಮತ್ತು 4 ಸಾವಿರ ರೂ. ನಗದು ಸೇರಿದಂತೆ ಒಟ್ಟು 24 ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಕಳುವಾಗಿರುವುದು ಮನೆಯವರಿಗೆ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.
Leave a Comment