• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು

October 1, 2017 by Sachin Hegde Leave a Comment

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ “ಬಯಲು ಬಹಿರ್ದೆಸೆ ಗ್ರಾಮ” ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ!
ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, ಅಗ್ರಗೋಣ, ಸುಂಕಸಾಳ,ಬೊಬ್ರವಾಡ) ಕುಮಟಾ ತಾಲೂಕು (ಸೊಪ್ಪಿನಹೊಸಳ್ಳಿ, ಬರ್ಗಿ, ಮೂರುರು, ಕೋಡ್ಕಣಿ, ಹಿರೆಗುತ್ತಿ, ಕಲ್ಲಬ್ಬೆ) ಹೊನ್ನಾವರ ತಾಲೂಕ (ಹೆರಂಗಡಿ, ಕಡ್ಲೆ, ಹಳದಿಪುರ, ಖರ್ವಾ, ಕೋಡಾಣಿ, ಕುದ್ರಗಿ) ಭಟ್ಕಳ ತಾಲೂಕ ( ಮಾರುಕೇರಿ, ಹಾಡುವಳ್ಳೀ,ಯಲ್ವಡಿಕವೂರ, ಮಾವಳ್ಳಿ) ಸಿದ್ದಾಪುರ ತಾಲೂಕ (ನಿಲ್ಕುಂದ, ಇಟಗಿ,ಹಸರಗೋಡ, ಹೆಗ್ಗರಣಿ, ಶಿರಳಗಿ, ತ್ಯಾಗಲಿ,ತಂಡಾಗುಂಡಿ, ಮನಮನೆ,ಬಿದ್ರಕಾನ್, ಅಣಲೆಬೈಲ್) ಮುಂಡಗೋಡ ತಾಲೂಕಿನ (ಓಣೀಕೇರಿ, ಗುಂಜಾವತಿ,ಚವಡಳ್ಳಿ,ಬಾಚಣಕಿ,ಬೆಡಸಗಾಂವ,ಮೈನಳ್ಳಿ, ಮಳಗಿ ಮತ್ತು ಪಾಳಾ) ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಶೌಚ ಗ್ರಾಮವಾಗಿವೆ. ಈ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಪಿ.ಡಿ.ಓ ಗಳು ಪ್ರಶಸ್ತಿಗಾಗಿ ಅ.2 ರಂದು ಬೆಂಗಳೂರು ತೆರಳಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ, ಜೋಯಿಡಾ ಮತ್ತು ಯಲ್ಲಾಪುರ ತಾಲೂಕನ್ನು ಹೊರತು ಪಡಿಸಿ ಉಳಿದ ತಾಲೂಕಿನ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ವಹಿಸಲಾಗಿತ್ತು.
ಸರ್ವಕುಟುಂಬ ಸಮೀಕ್ಷೆಯ ಪ್ರಕಾರ ಹಾಗೂ ಎಂ.ಐ.ಎಸ್ ದಾಖಲೆಯಲ್ಲಿರುವ ಪಂಚಾಯತಿಯಲ್ಲಿ ನೊಂದಾಯಿತ ಪ್ರತಿಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು. ಇಲ್ಲವಾದವರು ಶೌಚಾಲಯವನ್ನು ಹೊಂದಬೇಕು ಎನ್ನುವ ಮಾನದಂಡ ನೀಡಲಾಗಿತ್ತು. ಅದರಂತೆ ಜಿಲ್ಲಾಪಂಚಾಯತ ಈ ಮೇಲಿನ ಪಂಚಾಯತಗಳಲಿ ಸಂಪೂರ್ಣವಾಗಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಸರಕಾರವು ಆ ವರದಿಯ ಆಧಾರದಲ್ಲಿ ಸಂಪೂರ್ಣ ಬಯಲುಮುಕ್ತ ಶೌಚ ಗ್ರಾಮ ಎಂದು ಘೋಷಿಸಿದೆ. ಈ ಮಧ್ಯೆ ಜೋಯಿಡಾ ತಾಲೂಕಿನ ಜೋಯಿಡಾ, ಅಕೇತಿ, ನಾಗೋಡಾ, ನಂದಿಗದ್ದೆ ಮತ್ತು ರಾಮನಗರ ಮತ್ತು ಸಿರಸಿ ತಾಲೂಕಿನ ಹುಲೆಕಲ್, ಇಟಗುಳಿ, ಕೊಡ್ನಗದ್ದೆ ಹಾಗೂ ಕಾರವಾರ ತಾಲೂಕಿನ ಹಣಕೋಣ ಮತ್ತು ಘಾಡಸಾಯ ಗ್ರಾಮ ಪಂಚಾಯತಗಳಲ್ಲಿ ಶೇ.100 ಶೌಚಾಲಯಗಳಿಲ್ಲ. ಆದಾಗ್ಯೂ ಈ ಎರಡು ತಾಲೂಕು ಸಂಪೂರ್ಣ ಬಯಲು ಬಹಿರ್ದೆಸೆ ತಾಲೂಕು ಎಂದು ಜಿ.ಪಂ ಘೋಷಿಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿಯ ಪ್ರಕಾರವ ಸರಕಾರವು ಘೋಷಣೆ ಮಾಡಿದೆ.
ಜೊಯಿಡಾದ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಇನ್ನೂ ಶೌಚಾಲಯಕ್ಕೆ ಗುಂಡಿ ತೆಗೆಯುವ, ಕಟ್ಟಡ ಕಟ್ಟುವ ಕಾಮಗಾರಿ ನಡೆಯುತ್ತಿದ್ದರೂ ಜಿಲ್ಲಾಪಂಚಾಯತ ಅಂತಹ ಶೌಚಾಲಯ ಪೂರ್ಣಗೊಂಡಿದೆ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಅಲ್ಲಿಯ ಪ್ರಜ್ನಾವಂತ ನಾಗರಿಕರು ಪ್ರಶ್ನೆ ಮಾಡುವಂತಾಗಿದೆ. ಇನ್ನು ಕೆಲವು ಕುಟುಂಬಗಳಿಗೆ ಶೌಚಾಲಯವೇ ಇಲ್ಲ. ಅಂತಹ ಕುಟುಂಬಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ವಯಕ್ತಿ ಪ್ರತಿಷ್ಟೆ ಮತ್ತು ಪ್ರಶಸ್ತಿಯ ಹೆಗ್ಗಳಿಕೆ ಈ ರೀತಿಯ ತರಾತುರಿಯಲ್ಲಿ ಶೌಚಾಲಯ ನಿರ್ಮಿಸುವ ಮೊದಲೆ ಪ್ರಶಸ್ತಿ ಘೋಷಣೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಶಿರಸಿಯ ರೈತ ಶಕ್ತಿ ಪರಿಷತ್ ಈ ಬಗ್ಗೆ ಈ ಎಲ್ಲ ಗ್ರಾ.ಪಂಗಳಲಿ ಮೂರನೆ ವ್ಯಕ್ತಿಯ ತಪಾಸಣೆ ನಡೆಸುವಂತೆ ಒತ್ತಾಯಿಸಿದೆ.
ಶೌಚಾಲಯ ನಿರ್ಮಿಸುವ ಮೊದಲೆ ಜೋಯಿಡಾ ಮತ್ತು ಸಿರಸಿ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಿರುವ ಬಗ್ಗೆ ಕೆಲವು ಅಭಿಪ್ರಯಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಇನ್ನೂ ಶೌಚಾಲಯ ನಿರ್ಮಿಸಲು ಶ್ರಮಿಸುತ್ತಿರುವ ಪಂಚಾಯತಿಗಳ ಹುಬ್ಬೆರಿಸುವಂತೆ ಮಾಡಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Honavar News, Karwar News, Kumta News, SIDDAPURA, Sirsi News Tagged With: 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿ, ಅಕೇತಿ, ಅಗ್ರಗೋಣ, ಅಣಲೆಬೈಲ್) ಮುಂಡಗೋಡ ತಾಲೂಕಿನ (ಓಣೀಕೇರಿ, ಇಟಗಿ, ಇಟಗುಳಿ, ಉತ್ತರ ಕನ್ನಡ ಜಿಲ್ಲೆ, ಉಳಿದ ತಾಲೂಕಿನ 30 ಗ್ರಾಮ, ಕಡ್ಲೆ, ಕಲ್ಲಬ್ಬೆ) ಹೊನ್ನಾವರ ತಾಲೂಕ (ಹೆರಂಗಡಿ, ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ, ಕುದ್ರಗಿ) ಭಟ್ಕಳ ತಾಲೂಕ ( ಮಾರುಕೇರಿ, ಕೊಡ್ನಗದ್ದೆ ಹಾಗೂ ಕಾರವಾರ ತಾಲೂಕಿನ ಹಣಕೋಣ, ಕೋಡಾಣಿ, ಕೋಡ್ಕಣಿ, ಖರ್ವಾ, ಗುಂಜಾವತಿ, ಗ್ರಾ.ಪಂ ಅಧಿಕಾರಿಗಳು, ಚವಡಳ್ಳಿ, ಜೋಯಿಡಾ ತಾಲೂಕಿನ ಜೋಯಿಡಾ, ತಂಡಾಗುಂಡಿ, ತ್ಯಾಗಲಿ, ನಂದಿಗದ್ದೆ ಮತ್ತು ರಾಮನಗರ ಮತ್ತು ಸಿರಸಿ ತಾಲೂಕಿನ ಹುಲೆಕಲ್, ನಾಗೋಡಾ, ಪ್ರಶಸ್ತಿ ಸ್ವೀಕಾರ, ಬಯಲು ಬಹಿರ್ದೆಸೆ ಗ್ರಾಮ, ಬಯಲು ಶೌಚಮುಕ್ತ ಗ್ರಾಮ, ಬರ್ಗಿ, ಬಾಚಣಕಿ, ಬಿದ್ರಕಾನ್, ಬೆಂಗಳೂರು ತೆರಳುತ್ತಿರುವ, ಬೆಡಸಗಾಂವ, ಬೊಬ್ರವಾಡ) ಕುಮಟಾ ತಾಲೂಕು (ಸೊಪ್ಪಿನಹೊಸಳ್ಳಿ, ಮನಮನೆ, ಮಳಗಿ ಮತ್ತು ಪಾಳಾ, ಮಾವಳ್ಳಿ) ಸಿದ್ದಾಪುರ ತಾಲೂಕ (ನಿಲ್ಕುಂದ, ಮೂರುರು, ಮೈನಳ್ಳಿ, ಯಲ್ವಡಿಕವೂರ, ವಂದಿಗೆ, ಶಿರಳಗಿ, ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ, ಶೌಚಾಲಯವೇ ನಿರ್ಮಾಣ, ಸುಂಕಸಾಳ, ಹಸರಗೋಡ, ಹಳದಿಪುರ, ಹಾಡುವಳ್ಳೀ, ಹಾರವಾಡ, ಹಿರೆಗುತ್ತಿ, ಹಿಲ್ಲೂರು, ಹೆಗ್ಗರಣಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar