ಕಾರವಾರ:
ಉತ್ತಮ ಸಮಾಜ ನಿರ್ಮಾಣಕ್ಕೆ ಮದ್ಯ ವ್ಯಸನಿಗಳನ್ನು ಮುಖ್ಯ ವಾಹಿನಿಗೆ ತರಬೇಕಿದೆ ಎಂದು ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ನಡೆದ ಪಾನಮುಕ್ತರಿಗೆ ಅಭಿನಂದನೆ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಮದ್ಯದ ನಶೆ ಕುಟುಂಬಗಳನ್ನು ನಾಶ ಮಾಡುತ್ತಿದೆ. ಆರಂಭದಲ್ಲಿ ಶೋಕಿಗಾಗಿ ವ್ಯಸನ ಅಂಟಿಸಿಕೊಳ್ಳುವವರು ನಂತರ ಮನೆ-ಮಠಗಳನ್ನು ಮಾರಿ ಬೀದಿಗೆ ಬರುತ್ತಾರೆ. ಇದರ ಬಗ್ಗೆ ಎಚ್ಚರ ವಹಿಸಿ ಮದ್ಯ ವ್ಯಸನದಿಂದ ದೂರ ಇರಬೇಕು ಎಂದು ಹೇಳಿದರು. ಶಾಸಕ ಸತೀಶ್ ಸೈಲ್ ಮಾತನಾಡಿ, ದುಶ್ಚಟಗಳಿಂದ ಮನುಷ್ಯ ದೂರವಿರಬೇಕು. ಆಗ ಮಾತ್ರ ಸ್ವಾವಲಂಭಿ ಬದುಕು ಕಂಡುಕೊಳ್ಳಲು ಸಾದ್ಯ ಎಂದರು. ಯೋಜನೆ ನಿರ್ದೇಶಕ ಲಕ್ಷಣ ಎಂ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಳ್ಳೆಯ ವಿಚಾರಗಳಿಂದ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಶಿಬಿರಾಧಿಕಾರಿ ಭಾಸ್ಕರ್ ಮಾತನಾಡಿ ಎಲ್ಲರೂ ಜಾಗೃತರಾದಾಗ ದೇಶದ ಐಕ್ತಯೆ ಸಾದ್ಯ ಎಂದರು.
ಮಾಜಿ ಶಾಸಕ ಗಂಗಾಧರ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಮಾಜಿ ಸದಸ್ಯೆ ರೂಪಾಲಿ ನಾಯ್ಕ, ನಗರಸಭೆ ಸದಸ್ಯ ದೇವಿದಾಸ ನಾಯ್ಕ, ಪ್ರೇಮಾನಂದ ಗುನಗಿ, ಪ್ರಮುಖರಾದ ಎಮ್.ಎರ್ ನಾಯ್ಕ, ವಾಮನ ಎಸ್ ನಾಯ್ಕ ವೇದಿಕೆಯಲ್ಲಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮದಳ್ಳಿ ವಲಯದ ಮೇಲ್ವಿಚಾರಕ ಸಂದೀಪ ನಾಯ್ಕ ನಿರ್ವಹಿಸಿದರು. ರೋಶನಿ ಸಂಗಡಿಗರು ಪ್ರಾರ್ಥಿಸಿದರು. ಯೋಜನಾಧಿಕಾರಿ ಶೇಖರ ನಾಯ್ಕ ನಿರ್ವಹಿಸಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶಾಂತಿ ವಂದಿಸಿದರು.
Leave a Comment