ಕಾರವಾರ: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಯಮಿತವೂ 1.25ಕೋಟಿ ಲಾಭ ಗಳಿಸಿದೆ ಎಂದು ಫೇಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ತಿಳಿಸಿದರು.
ಕೋಡಿಭಾಗದ ಕಚೇರಿಯಲ್ಲಿ ನಡೆದ ಸರ್ವ ಸಾದಾರಣ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 13 ವರ್ಷಗಳಿಂದ ಫೆಡರೇಶನ್ ಲಾಭದಲ್ಲಿದೆ. ಇದಕ್ಕೆ ಸರ್ವ ಸದಸ್ಯರ ಕೆಲಸ ಕಾರಣ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಸರ್ಕಾರದ ಯೋಜನೆ ಅಡಿ ಮೀನುಗಾರರಿಗೆ ಸಹಾಯ ಮಾಡಲು ಫೇಡರೇಶನ್ ಸದಾ ಮುಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಫೇಡರೇಶನ್ನ ನಿರ್ದೇಶಕ ಭಾಸ್ಕರ ಹೆಗಡೆ, ಉಪಾಧ್ಯಕ್ಷ ದುರ್ಗಪ್ಪ ಮೊಗೇರ, ಪ್ರಮುಖರಾದ ರಾಜು ಎಲ್ ತಾಂಡೇಲ್, ಉಮೇಶ ಜಿ ಮೇಸ್ತಾ, ಸುದಾಕರ ಹರಿಕಂತ್ರ, ನಾರಾಯಣ ಖಾರ್ವಿ, ಸುರೇಶ ತಾಂಡೇಲ, ರಾಘವೇಂದ್ರ ಜಾದವ್, ಗೌರೀಶ ಖಾರ್ವಿ, ಉಮೇಶ ಖಾರ್ವಿ, ದಿವಾಕರ ಮೊಗೇರ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಲ್ ದೊಡ್ಮನಿ ಸಭೆಯಲ್ಲಿದ್ದು ಸಲಹೆಗಳನ್ನು ನೀಡಿದರು. ಪ್ರದಾನ ವ್ಯವಸ್ಥಾಪಕ ಶ್ರೀಪಾದ ಕುಲಕರ್ಣಿ ನಿರ್ವಹಿಸಿ, ವಂದಿಸಿದರು.
Leave a Comment