ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತೋಡೂರಿನ ಶ್ರೀ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕøತಿಕ ಯುವಕ ಮಂಡಳಿಯಿಂದ ಅ.8 ರಂದು ಹೋಬಳಿ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ.
ಪುರುಷರಿಗಾಗಿ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾವಳಿಗಳು
ನಡೆಯಲಿವೆ. ಮಕ್ಕಳಿಗಾಗಿ ಲಿಂಬು ಚಮಚ, ಮಹಿಳೆಯರಿಗಾಗಿ ಕೊಡ ಹೊತ್ತು ಓಡುವ ಸ್ಪರ್ಧೆ, ಹಗ್ಗ ಜಗ್ಗಾಟ ಹಾಗೂ ಥ್ರೋ ಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ತಂಡಗಳು,ಕ್ರೀಡಾಪಟುಗಳು ಅ.6 ರ ಸಂಜೆಯ ಒಳಗೆ ಆಯೋಜಕರಲ್ಲಿ ಹೆಸರು ನೋಂದಾಯಿಸಲು ಕೋರಿದೆ. ಹೆಸರು ನೋಂದಾಯಿಸಲು ವೀರಭದ್ರ ಗೌಡ (ಮೊ:9886114533), ಪ್ರಶಾಂತ ಮಹಾಲೆ (ಮೊ:8722967890)ಅವರನ್ನು ಸಂಪರ್ಕಿಸಬಹುದಾಗಿದೆ.
Leave a Comment