ಹಳಿಯಾಳ ; ಧೋಬಿ, ರಜಕ ಮತ್ತು ಪರಿಟ ಎಂಬ ಹೆಸರಿನಲ್ಲಿ ಕರೆಯುತ್ತಿರುವ ಮಡಿವಾಳ ಸಮಾಜವನ್ನು ಡಾ, ಅನ್ನಪೂರ್ಣ ವರದಿ ಮತ್ತು ಇತರ ರಾಜ್ಯಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲಾಗಿದ್ದು ಆ ವರದಿಯನ್ನು ರಾಜ್ಯದಲ್ಲಿಯೂ ಸಹ ಅನುಷ್ಠಾನಗೊಳಿಸಬೇಕು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಮಾಜ ಸಂಘದವರು ಮೆರವಣಿಗೆಯನ್ನು ನಡೆಸಿ ಹಳಿಯಾಳ ತಹಶೀಲದಾರ್ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿಯ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಮೆರವಣಿಗೆಯನ್ನು ನಡೆಸಿ ಮಿನವಿಧಾನಸೌಧಕ್ಕೆ ಆಗಮಿಸಿ ಮಡಿವಾಳ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರ್ಕಾರವು ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲದಾರ ವಿದ್ಯಾಧರ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 17 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಡಿವಾಳ ಸಮಾಜವು ಆರ್ಥಿಕವಾಗಿ, ಸಾಮಾಜಿಕ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿಯೂ ಅತೀ ಹಿಂದೂಳಿದ ಸಮಾಜವಾಗಿದ್ದು ಸಮುದಾಯದ ಹೆಚ್ಚಿನ ಜನರು ಕೆಳಸ್ಥರದ ಉದ್ಯೋಗದಲ್ಲಿದ್ದಾರೆ. ಇದನ್ನು ಮನಗಂಡು ಆಯಾ ರಾಜ್ಯಗಳ ಶಿಪಾರಸ್ಸಿನಂತೆ ಕೇಂದ್ರ ಸರಕಾರವು 18 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆ ಮಾಡಿದ್ದು ಅದರಂತೆಯೇ ರಾಜ್ಯದಲ್ಲಿಯೂ ಸಹ ಮಡಿವಾಳ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡುವಂತೆ ಆಗ್ರಹಿಸಿದ್ದಾರೆ.
1978 ರಿಂದಲೂ ರಾಜ್ಯ ಸಂಘದಿಂದ ಹಿಡಿದು ತಾಲೂಕಾ ಸಂಘಗಳಿಂದ ಮನವಿಗಳನ್ನು ಸಲ್ಲಿಸಲಾಗಿದೆ. ಅಲ್ಲದೇ 2014, 2016 ಮತ್ತು ಪೆಬ್ರುವರಿ 2017 ರಲ್ಲಿ ರಾಜ್ಯ ಮಟ್ಟದ ಸಮಾವೇಶಗಳನ್ನು ಮಾಡುವುದರ ಮೂಲಕ ಗಮನ ಸೆಳೆಯಲಾಗಿದೆ. ಅಲ್ಲದೇ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು ರಾಜ್ಯದ ಮಡಿವಾಳ ಸಮಾಜದ ಪ್ರಮುಖ ಮತ್ತು ಮೂಲಭೂತವಾದ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರಕಾರವು ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು.ಜೊತೆಗೆ ಕೇಂದ್ರ ಸರಕಾರಕ್ಕೆ ಅನುಮೋದನೆಗಾಗಿ ಶಿಪಾರಸ್ಸು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾಂದಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಆನಂದ ಮಡಿವಾಳ, ರಮೇಶ ಮುಜುಕರ, ಬಸವರಾಜ ಮಡಿವಾಳ, ಬಾಳಕೃಷ್ಣ ಅಗಸರ, ಶಂಭಾಜಿ ಮಡಿವಾಳ, ತುಕಾರಾಮ ಮಡಿವಾಳ, ದೇಮಾಣಿ ಮಡಿವಾಳ, ರಾಮಾ ಮಡಿವಾಳ, ಮಸಣು ಮಡಿವಾಳ, ಮಹೇಶ ಮಡಿವಾಳ, ಹೂವಾಜಿ ಮಡಿವಾಳ, ಸಹದೇವ ಮಡಿವಾಳ, ಅಣ್ಣಪ್ಪಾ ಮಡಿವಾಳ ಮತ್ತು ಪಿ.ಡಿ.ಮಡಿವಾಳ ಇತರರು ಇದ್ದರು.
Leave a Comment